ಬನಶಂಕರಿ ದೇವಿಯ ಜನ್ಮದಿನ ನಿಮಿತ್ತ ರಜತ ಕೀರೀಟ ಪ್ರಭಾವಳಿ ವಿಶೇಷ ಪೂಜೆ
Rajata Keerita Prabhavali special puja on the occasion of Goddess Banashankari's birthday
ಲೋಕದರ್ಶನ ವರದಿ
ಕಂಪ್ಲಿ 15: ಸ್ಥಳೀಯ 18ನೇವಾರ್ಡಿನ ಭಾರತ ಟಾಕೀಸ್ ಹತ್ತಿರ ಶ್ರೀಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀಬನಶಂಕರಿ ದೇವಿಯ ಜನ್ಮದಿನದ ಅಂಗವಾಗಿ ದೇವಿಯ ಪ್ರತಿಮೆಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ನಡೆದವು. ದೇವಿಯ ಪ್ರತಿಮೆಗೆ ರಜತ ಕೀರೀಟ, ರಜತ ಪ್ರಭಾವಳಿ ಅಳವಡಿಸಿ ಪುಷ್ಪಗಳಿಂದ, ಬಾಳೆಗೊನೆಗಳಿಂದ ಅಲಂಕರಿಸಲಾಗಿತ್ತು. ಈಸಂದರ್ಭದಲ್ಲಿ ಅರ್ಚಕರಾದ ಓದಾ ಬಸವರಾಜ, ಒನಕೆ ಶಂಕರ್, ಶಂಕರಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷ ಬಳ್ಳಾರಿ ಬಸವರಾಜ, ಸದ್ಭಕ್ತರಾದ ಕರಡಕಲ್ ವಿರುಪಣ್ಣ, ಕವಿತಾಳ ಶಿವಕುಮಾರ್, ಸಪ್ಪರದ ರಾಘವೇಂದ್ರ, ತುಳಸಿರಾಮಚಂದ್ರ, ಬಿ.ಎಸ್.ಮಂಜುನಾಥ, ಪುಟ್ಟಿ ರಾಘವೇಂದ್ರ, ನೀಲಕಂಠ ಸೇರಿ ಸದ್ಭಕ್ತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 