ಬನಶಂಕರಿ ದೇವಿಯ ಜನ್ಮದಿನ ನಿಮಿತ್ತ ರಜತ ಕೀರೀಟ ಪ್ರಭಾವಳಿ ವಿಶೇಷ ಪೂಜೆ
Rajata Keerita Prabhavali special puja on the occasion of Goddess Banashankari's birthday
ಲೋಕದರ್ಶನ ವರದಿ
ಕಂಪ್ಲಿ 15: ಸ್ಥಳೀಯ 18ನೇವಾರ್ಡಿನ ಭಾರತ ಟಾಕೀಸ್ ಹತ್ತಿರ ಶ್ರೀಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀಬನಶಂಕರಿ ದೇವಿಯ ಜನ್ಮದಿನದ ಅಂಗವಾಗಿ ದೇವಿಯ ಪ್ರತಿಮೆಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ನಡೆದವು. ದೇವಿಯ ಪ್ರತಿಮೆಗೆ ರಜತ ಕೀರೀಟ, ರಜತ ಪ್ರಭಾವಳಿ ಅಳವಡಿಸಿ ಪುಷ್ಪಗಳಿಂದ, ಬಾಳೆಗೊನೆಗಳಿಂದ ಅಲಂಕರಿಸಲಾಗಿತ್ತು. ಈಸಂದರ್ಭದಲ್ಲಿ ಅರ್ಚಕರಾದ ಓದಾ ಬಸವರಾಜ, ಒನಕೆ ಶಂಕರ್, ಶಂಕರಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷ ಬಳ್ಳಾರಿ ಬಸವರಾಜ, ಸದ್ಭಕ್ತರಾದ ಕರಡಕಲ್ ವಿರುಪಣ್ಣ, ಕವಿತಾಳ ಶಿವಕುಮಾರ್, ಸಪ್ಪರದ ರಾಘವೇಂದ್ರ, ತುಳಸಿರಾಮಚಂದ್ರ, ಬಿ.ಎಸ್.ಮಂಜುನಾಥ, ಪುಟ್ಟಿ ರಾಘವೇಂದ್ರ, ನೀಲಕಂಠ ಸೇರಿ ಸದ್ಭಕ್ತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 