ಅಕ್ರಮ ಮರಳು ಅಡ್ಡೆ ಮೇಲೆ ದಾಳಿಖಣಛ ಗಣಿ ಇಲಾಖೆಯಿಂದ 1.80 ಲಕ್ಷದ ತೆಪ್ಪ ವಶ ಚಿಕ್ಕ ಕುರುವತ್ತಿ ಗ್ರಾಮದ ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹ : ದೀಡೀರ್ ದಾಳಿ ಅಪಾರ ಮೌಲ್ಯ ವಸ್ತುಗಳ ವಶ.

ಅಕ್ರಮ ಮರಳು ಅಡ್ಡೆ ಮೇಲೆ ದಾಳಿಖಣಛ ಗಣಿ ಇಲಾಖೆಯಿಂದ 1.80 ಲಕ್ಷದ ತೆಪ್ಪ ವಶ ಚಿಕ್ಕ ಕುರುವತ್ತಿ ಗ್ರಾಮದ ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹ : ದೀಡೀರ್ ದಾಳಿ ಅಪಾರ ಮೌಲ್ಯ ವಸ್ತುಗಳ  ವಶ. Raid on illegal sand mining, Raft worth Rs 1.80 lakh seized by the Mines Department. Illegal sand mi

ಅಕ್ರಮ ಮರಳು ಅಡ್ಡೆ ಮೇಲೆ ದಾಳಿಖಣಛ ಗಣಿ ಇಲಾಖೆಯಿಂದ 1.80 ಲಕ್ಷದ ತೆಪ್ಪ ವಶ ಚಿಕ್ಕ ಕುರುವತ್ತಿ ಗ್ರಾಮದ ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹ : ದೀಡೀರ್ ದಾಳಿ ಅಪಾರ ಮೌಲ್ಯ ವಸ್ತುಗಳ  ವಶ. 

ರಾಣೇಬೆನ್ನೂರು 21 : ತಾಲೂಕಿನ ಚಿಕ್ಕ ಕುರುವತ್ತಿ ಗ್ರಾಮದ ತುಂಗಭದ್ರಾ ನದಿ ಪಾತ್ರದಲ್ಲಿ ( ದಡದಲ್ಲಿ) ಸ್ಥಳೀಯರು ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗ್ರಾಮೀಣ ಪೋಲಿಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳು ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಕ್ರಮ ಮರಳು ಸಂಗ್ರಹ ದಂದೆಕೋರರು, ತಲೆ  ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.ನದಿ ದಡದಲ್ಲಿ ಮರಳನ್ನು ಸಂಗ್ರಹಿಸುತ್ತಿದ್ದ ಮೂರು ಕಬ್ಬಿಣದ ತೆಪ್ಪಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ತಮ್ಮ ವಶಕ್ಕೆ ಪಡೆದುಕೊಂಡ ಒಟ್ಟು  ಮೂರು ತೆಪ್ಪಗಳ ಮೌಲ್ಯ ಸುಮಾರು1.80 ಲಕ್ಷ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಯಿತು. ನಂತರ ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಪೊಲೀಸ್ ಠಾಣೆಯಲ್ಲಿ ಕಬ್ಬಿಣದ ತೆಪ್ಪಗಳನ್ನು ಸಾಗಿಸಿ  ಹಾಕಲಾಗಿದೆ, ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು  ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಸಿದ್ದಾರೆ.