ರಸ್ತೆ ಕಾಮಗಾರಿಗೆ ರಾಹುಲ ಜಾರಕಿಹೊಳಿ ಗುದ್ದಲಿ ಪೂಜೆ

ರಸ್ತೆ ಕಾಮಗಾರಿಗೆ ರಾಹುಲ ಜಾರಕಿಹೊಳಿ ಗುದ್ದಲಿ ಪೂಜೆ Rahula Jarakiholi Guddali Puja for road works

ರಸ್ತೆ ಕಾಮಗಾರಿಗೆ ರಾಹುಲ ಜಾರಕಿಹೊಳಿ ಗುದ್ದಲಿ ಪೂಜೆ

ಯಮಕನಮರಡಿ, 06 ; ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅನುದಾನದಲ್ಲಿ ಸಚಿವರ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಶಾಹಬಂದರ ಗ್ರಾಮದಿಂದ ಗುಟಗುದ್ದಿ ಗ್ರಾಮದವರಿಗೆ ರೂ 5 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದ್ದರು.  

ಈ ಸಂದರ್ಭದಲ್ಲಿ ಬ್ರಹ್ಮ ಬಾಳಯ್ಯ ಮಹಾ ಸ್ವಾಮೀಜಿಗಳು ಸಚಿವರ ಆಪ್ತ ಸಹಾಯಕರಾದ ಮಾರುತಿ ಗುಟಗುದ್ದಿ ಲಗಮಣ್ಣ ಪನಗುದ್ದಿ ಕೆಇಬಿ ಡೈರೆಕ್ಟರಾದ ಈರ​‍್ಪ ಭಂಜೀರಾಮ್ ಪಂಚ ಗ್ಯಾರಂಟಿ ಜೀಲ್ಲಾ ಉಪಾಧ್ಯಕ್ಷರಾದ ಬಸವರಾಜ ನಾಯಿಕ ಯಮಕನಮರಡಿ ಬ್ಲಾಕ್ ಎಸ್‌ಟಿ ಘಟಕದ ಅಧ್ಯಕ್ಷರಾದ ಮಾರುತಿ ಕುದರಿ ಗಂಗರಾಮ ಇರಬಾಂವಿ ರಾಮಚಂದ್ರ ನಾಯಕ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.