ನಾಳೆ ಆರ್.ಎಸ್.ಎಸ್ ಪಥಸಂಚಲನ
RSS procession tomorrow
ಲೋಕದರ್ಶನ ವರದಿ
ನಾಳೆ ಆರ್.ಎಸ್.ಎಸ್ ಪಥಸಂಚಲನ
ಬೀಳಗಿ 10: ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಾಬ್ದಿ ಸಮಾರಂಭ ಅದ್ಧೂರಿಯಾಗಿ ಆಚರಿಸಲು ಸಂಪೂರ್ಣ ತಯಾರಿಗೊಂಡಿದೆ. ಬೀಳಗಿ ಪಟ್ಟಣದ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಪರಪರಿ ಹಾಗೂ ಬ್ಯಾನರ್, ಕಟೌಟ್ಗಳಿಂದ ಶೃಂಗಾರಗೊಂಡಿದೆ.
ತಾಲೂಕು ಪಥಸಂಚಲನವು ಅ.12. ಭಾನುವಾರ ರಂದು ಸಾಯಂಕಾಲ 5-30 ಗಂಟೆಗೆ ಇಲ್ಲಿಯ ಸಿದ್ಧೇಶ್ವರ ಪ. ಪೂ. ಕಾಲೇಜು ಆವರಣದಲ್ಲಿ ಸಮಾರಂಭ ಜರಗುವುದು.
ಮುಖ್ಯ ಅತಿಥಿಯಾಗಿ, ಕೃಷ್ಣದೇವರಾಯ ಪತ್ತಿನ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಸಿದ್ದನಗೌಡ ಎಸ್. ಪಾಟೀಲ ವಹಿಸುವರು. ಬೌದ್ಧಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ಅರುಣಕುಮಾರ ಮಾತನಾಡುವರು.
ಪಥಸಂಚಲನ ಮಾರ್ಗಸೂಚಿ: ಮಾರ್ಗ 01: ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ನಂದಿ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಕಿಲ್ಲಾ ಓಣಿ (ಯು ಟರ್ನ್), ಗ್ರಾಮ ಚಾವಡಿ, ನೇಕಾರ ಓಣಿ, ಹುಚ್ಚೇಶ್ವರ ನಗರ, ಬಸವ ವೃತ್ತ, ಶಿವಾಜಿ ವೃತ್ತ, ಸಿದ್ಧೇಶ್ವರ ಕಾಲೇಜು ಮೈದಾನ ಸೇರುವುದು.
ಮಾರ್ಗ 02: ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಗಾಂಧಿ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಕಂಬಾರ ಓಣಿ, ಸುರಳಿಬಾವಿ ಓಣಿ, ಹೋಳಿ ಕಟ್ಟಿ, ಮುದ್ದೇಶ್ವರ ದೇವಸ್ಥಾನ (ಯು ಟರ್ನ್) ಬಸವ ವೃತ್ತ, ಶಿವಾಜಿ ವೃತ್ತ, ಸಿದ್ಧೇಶ್ವರ ಕಾಲೇಜು ಮೈದಾನ ಸೇರುವುದು ಎಂದು ತಾಲೂಕು ಕಾರ್ಯವಾಹ ಪ್ರೇಮ್ ಕಣವಿ ಪತ್ರಿಕೆಗೆ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 