ನಾಳೆ ಆರ್.ಎಸ್.ಎಸ್ ಪಥಸಂಚಲನ
RSS procession tomorrow
ಲೋಕದರ್ಶನ ವರದಿ
ನಾಳೆ ಆರ್.ಎಸ್.ಎಸ್ ಪಥಸಂಚಲನ
ಬೀಳಗಿ 10: ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಾಬ್ದಿ ಸಮಾರಂಭ ಅದ್ಧೂರಿಯಾಗಿ ಆಚರಿಸಲು ಸಂಪೂರ್ಣ ತಯಾರಿಗೊಂಡಿದೆ. ಬೀಳಗಿ ಪಟ್ಟಣದ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಪರಪರಿ ಹಾಗೂ ಬ್ಯಾನರ್, ಕಟೌಟ್ಗಳಿಂದ ಶೃಂಗಾರಗೊಂಡಿದೆ.
ತಾಲೂಕು ಪಥಸಂಚಲನವು ಅ.12. ಭಾನುವಾರ ರಂದು ಸಾಯಂಕಾಲ 5-30 ಗಂಟೆಗೆ ಇಲ್ಲಿಯ ಸಿದ್ಧೇಶ್ವರ ಪ. ಪೂ. ಕಾಲೇಜು ಆವರಣದಲ್ಲಿ ಸಮಾರಂಭ ಜರಗುವುದು.
ಮುಖ್ಯ ಅತಿಥಿಯಾಗಿ, ಕೃಷ್ಣದೇವರಾಯ ಪತ್ತಿನ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಸಿದ್ದನಗೌಡ ಎಸ್. ಪಾಟೀಲ ವಹಿಸುವರು. ಬೌದ್ಧಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ಅರುಣಕುಮಾರ ಮಾತನಾಡುವರು.
ಪಥಸಂಚಲನ ಮಾರ್ಗಸೂಚಿ: ಮಾರ್ಗ 01: ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ನಂದಿ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಕಿಲ್ಲಾ ಓಣಿ (ಯು ಟರ್ನ್), ಗ್ರಾಮ ಚಾವಡಿ, ನೇಕಾರ ಓಣಿ, ಹುಚ್ಚೇಶ್ವರ ನಗರ, ಬಸವ ವೃತ್ತ, ಶಿವಾಜಿ ವೃತ್ತ, ಸಿದ್ಧೇಶ್ವರ ಕಾಲೇಜು ಮೈದಾನ ಸೇರುವುದು.
ಮಾರ್ಗ 02: ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಗಾಂಧಿ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಕಂಬಾರ ಓಣಿ, ಸುರಳಿಬಾವಿ ಓಣಿ, ಹೋಳಿ ಕಟ್ಟಿ, ಮುದ್ದೇಶ್ವರ ದೇವಸ್ಥಾನ (ಯು ಟರ್ನ್) ಬಸವ ವೃತ್ತ, ಶಿವಾಜಿ ವೃತ್ತ, ಸಿದ್ಧೇಶ್ವರ ಕಾಲೇಜು ಮೈದಾನ ಸೇರುವುದು ಎಂದು ತಾಲೂಕು ಕಾರ್ಯವಾಹ ಪ್ರೇಮ್ ಕಣವಿ ಪತ್ರಿಕೆಗೆ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 