ಕ್ವಿಟ್ಇಂಡಿಯಾ ಚಳುವಳಿ ದಿನ ಹಾಗೂ ಚೈತನ್ಯ ಭಾರತದ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ
Quit India Movement Day and Chaitanya Bharat celebration program inaugurated
ರಾಣಿಬೆನ್ನೂರ 17: ಭಾರತ ಸುಸಂಸ್ಕೃತ ರಾಷ್ಟ್ರ, ಸ್ವಾತಂತ್ರ್ಯ ಹೋರಾಟಗಾರರ ಫಲವೇ ಇಂದಿನ ಭಾರತ. ವಿದೇಶಿಯರು ನಮ್ಮನ್ನು ದಾಸ್ಯತನದಿಂದ ಕಂಡರೂ ಈ ಸುಸಂಸ್ಕೃತ ರಾಷ್ಟ್ರದ ಮೇಲೆ ದಾಳಿ ಮಾಡಲು ಬ್ರಿಟೀಷರು ನಮ್ಮವರನ್ನೇ ನಮ್ಮ ವಿರುದ್ಧ ನಿಲ್ಲುವಂತೆ ಸಂಚು ರೂಪಿಸುತ್ತಿದ್ದರು. ಈ ಗುಲಾಮಗಿರಿತನದಿಂದ ಮುಕ್ತಿಗೊಳಿಸಿದವರು ಸ್ವಾತಂತ್ರ್ಯ ಹೋರಾಟಗಾರರು. ಅವರ ಹೋರಾಟದ ಫಲವಾಗಿ ಲಭಿಸಿದ ಈ ಸ್ವಾತಂತ್ರ್ಯವನ್ನು ನಾವೆಲ್ಲಾ ಸಂರಕ್ಷಿಸಬೇಕಾಗಿದೆ ಎಂದು ಹಾವೇರಿ ಬಸವೇಶ್ವರ ಬಿಇಡಿ ಕಾಲೇಜು ಪ್ರಾಚಾರ್ಯ ಪ್ರೊಽ ಮಂಜುನಾಥ ವಡ್ಡರ ಹೇಳಿದರು.
ನಗರದ ಬಿ.ಎ.ಜೆ.ಎಸ್.ಎಸ್ ಬಿ.ಇಡಿ ಕಾಲೇಜಿನಲ್ಲಿ ನೆಡೆದ ಕ್ವಿಟ್ ಇಂಡಿಯಾ ಚಳುವಳಿ ದಿನ ಹಾಗೂ ಚೈತನ್ಯ ಭಾರತದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ನಮಗೆ ಸುಮ್ಮನೆ ಬಂದಿದ್ದಲ್ಲ ಸಾವಿರಾರು ಜನರ ತ್ಯಾಗ ಮತ್ತು ಬಲಿದಾನವೇ ಇದಕ್ಕೆ ಕಾರಣ, ಅಂತಹ ಸ್ವಾತಂತ್ರ್ಯಹೋರಾಟಗಾರರನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಎನ್.ಎಸ್.ಎಸ್ ಕಾರ್ಯಕ್ರಾಮಾಧಿಕಾರಿಗಳಾದ ಪರಶುರಾಮ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಎಂ.ಎಂ.ಮೃತ್ಯುಂಜಯ, ಶಿವಕುಮಾರ ಬಿಸಲಳ್ಳಿ.ಎ. ಶಂಕರನಾಯ್ಕ,
ಡಾ. ಹೆಚ್. ಐ. ಬ್ಯಾಡಗಿ, ಶ್ರೀಕಾಂತ ಗೌಡಶಿವಣ್ಣನವರ ಸೇರಿದಂತೆ ಮತ್ತಿತರರು ಇದ್ದರು. ನಗರದ ಬಿ.ಎ.ಜೆ.ಎಸ್.ಎಸ್ ಬಿ.ಇಡಿ ಕಾಲೇಜಿನಲ್ಲಿ ನೆಡೆದ ಕ್ವಿಟ್ ಇಂಡಿಯಾ ಚಳುವಳಿ ದಿನ ಹಾಗೂ ಚೈತನ್ಯ ಭಾರತದ ಸಂಭ್ರಮ ಕಾರ್ಯಕ್ರಮವನ್ನು ಪ್ರಾಚಾರ್ಯ ಪ್ರೊಽ ಮಂಜುನಾಥ ವಡ್ಡರ ಉದ್ಘಾಟಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 