ಇಂಡಿಯಲ್ಲಿ ಪುರಂದರದಾಸರ ಜಯಂತಿ ಆಚರಣೆ
Purandaradas Jayanti Celebration in Indi
ಇಂಡಿ 19: ಪುರಂದರದಾಸರು ತಾವು ಸ್ವತಃ ರಚಿಸಿರುವ ಕೀರ್ತನೆಗಳ ಮೂಲಕ ಜಗದೋಧ್ದಾರ ಮಾಡಿದ ಮಹಾನುಭಾವರು ಎಂದು ವೆಂಕಟೇಶ ಕುಲಕರ್ಣಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಇಂಡಿ ಪಟ್ಟಣದ ಪುರಂದರದಾಸರ ವೃತ್ತದಲ್ಲಿ ಪುರಂದರದಾಸರ ಜಯಂತ್ಯೋತ್ಸವ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರು ಎಂದು ಬಿರುದು ಪಡೆದುಕೊಂಡಿದ್ದಾರೆ. ಇದಲ್ಲದೇ ದಾಸ ಸಾಹಿತ್ಯದ ಚಕ್ರವರ್ತಿ ಪುರಸ್ಕಾರ ಪಡೆದುಕೊಂಡಿದ್ದಾರೆ. ಇವರ ಅಂಕಿತ ನಾಮ ಪುರಂದರ ವಿಠ್ಠಲ ಆಗಿದೆ ಎಂದರು. 1584 ರಲ್ಲಿ ಅಳಮಟ್ಟಿಯಲ್ಲಿ ಜನಿಸಿದ ಇವರು ತಮ್ಮ ಜೀವನದುದ್ದಕ್ಕೂ ತಾವೇ ನಿರ್ಮಿಸಿದ ಕೀರ್ತನೆಗಳನ್ನು ಹಾಡಿ ಜನರನ್ನು ಸನ್ಮಾರ್ಗಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.ಜಯಂತ್ಯೋತ್ಸವದಲ್ಲಿ ಪ್ರೇಮಾ ಕುಲಕರ್ಣಿ, ಅಂಬುಜಾ ಪಾಟೀಲ, ಲಕ್ಮೀ ಕುಲಕರ್ಣಿ, ಹೇಮಲತಾ ಕುಲಕರ್ಣಿ, ಅರುಣಾ ಕುಲಕರ್ಣಿ, ಶೋಭಾ ಪಾಟೀಲ, ರಾಘವೇಂದ್ರ ಕುಲಕರ್ಣಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 