ಖಾಲಿ ಹುದ್ದೆಗಳ ನೇಮಕ ಶೀಘ್ರವಾಗಿಸಲು ಪ್ರತಿಭಟನೆ
Protest to expedite recruitment of vacant posts
ಖಾಲಿ ಹುದ್ದೆಗಳ ನೇಮಕ ಶೀಘ್ರವಾಗಿಸಲು ಪ್ರತಿಭಟನೆ
ರಬಕವಿ-ಬನಹಟ್ಟಿ 04: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳದೇ ಇರುವುದರಿಂದ ಪ್ರತಿ ವರ್ಷ ನಿರುದ್ಯೋಗಿಗಳ ಸೃಷ್ಠಿಯಾಗುತ್ತಿದೆ. ದೇಶ ಹಾಗೂ ರಾಜ್ಯದ ಜನತೆಯ ಸೇವಾ ಕಾರ್ಯಗಳು ಅಬಾಧಿತವಾಗಿ ಜನಸಾಮಾನ್ಯರಿಗೆ ದೊರೆಯಲು ಪ್ರತಿ ವರ್ಷ ನೇಮಕಾತಿಗಳು ನಿಯಮಿತವಾಗಿ ನಡೆದಲ್ಲಿ ನಾಗರಿಕರಿಗೂ ಅನುಕೂಲವಾಗುವ ಜೊತೆಗೆ ಕೆಂಭೂತವಾಗಿರುವ ನಿರುದ್ಯೋಗ ಸಮಸ್ಯೆಗೂ ಮುಕ್ತಿಯಾಗುತ್ತದೆಂದು ಬನಹಟ್ಟಿಯ ಜಿ.ಎಸ್.ಕೋಚಿಂಗ್ ಸೆಂಟರ್ ಮುಖ್ಯಸ್ಥ ಸಂಗಮೇಶ ಉಪ್ಪಾರ ಆಗ್ರಹಿಸಿದರು.
ಬನಹಟ್ಟಿ ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ ಮೆರವಣಿಗೆ ಮೂಲಕ ಸಾಗಿದ ನೂರಾರು ವಿದ್ಯಾರ್ಥಿಗಳು ತಹಶೀಲ್ದಾರ ಕಚೇರಿ ಎದುರು ಮಾತನಾಡಿ ಆಗ್ನಿವೀರ ನೇಮಕಾತಿಯಲ್ಲಿ ಮೊದಲಿದ್ದ ವಯೋಮಿತಿ ಸಡಿಲಿಕೆಗೊಳಿಸುವುದಾಗಿ ಹೇಳಿದ್ದ ಮಾತು ಇನ್ನೂ ಜಾರಿಯಾಗದ ಕಾರಣ ಸೈನಿಕರಾಗಿ ದೇಶಸೇವೆ ಮಾಡುವ ಕನಸು ಕಾಣುತ್ತಿರುವ ಯುವಕರು ಅವಕಾಶವಿಲ್ಲದೇ ನಿರಾಶರಾಗಿ, ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ವಯೋಮಿತಿ ಸಡಿಲಿಕೆ ಜೊತೆಗೆ ನಿಯಮಿತ ನೇಮಕಾತಿ ನಡೆದಲ್ಲಿ ನಿರುದ್ಯೋಗ ಸಮಸ್ಯೆಗೆ ಮುಕ್ತಿ ಹೇಳಲು ಸಾಧ್ಯವೆಂದರು. ತಹಶೀಲ್ದಾರ ಗೀರೀಶ ಸ್ವಾದಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಪಿಎಸ್ಸೈ ಶಾಂತಾ ಹಳ್ಳಿ, ವಿಠಲ ಉಪ್ಪಾರ, ಬಸವರಾಜ ಭೂತಾಳಿ, ಮಹಾದೇವ ಬಂಗಿ ಮೊದಲಾದವರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 