ಪರಿಸರದ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ : ವಿರೇಶ ಪಾಟೀಲ

Protecting the environment is everyone's responsibility: Viresh Patil

ಗದಗ 06 : ಪರಿಸರದ ಬಗ್ಗೆ ಅರಿವಿದ್ದರೆ ಸಾಲದು  ಅದರ ಬಗ್ಗೆ ಆಸಕ್ತಿ ಇಲ್ಲ. ಪರಿಸರವನ್ನು ಉಳಿಸಿ  ಮುಂದಿನ ಭವಿಷ್ಯಕ್ಕೆ ಕೊಡುಗೆ ನೀಡಬೇಕಾಗಿದೆ ಅರಣ್ಯ ಇಲಾಖೆಯ  ಗಸ್ತು ಅರಣ್ಯ ಪಾಲಕರಾದ ವಿರೇಶ ಪಾಟೀಲ ಅವರು ಹೇಳಿದರು.    

ಅವರು ನಗರದ 33 ನೇ ವಾರ್ಡಿನ ಬಿಸಿಎಂ ಹಾಸ್ಟೇಲ್ ಹತ್ತಿರ  ಶ್ರೀ ವಿದ್ಯಾಗಣಪತಿ ಸೇವಾ ಟ್ರಸ್ಟ್‌  ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿ, ಅರಣ್ಯವನ್ನು ಉಳಿಸಿ ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.  

 ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ ಅವರು ಮಾತನಾಡಿ,  

ಪರಿಸರ ವಿನಾಶದಿಂದ ಇಂದಿನ ದಿನಗಳಲ್ಲಿ ಅತೀ ಹೆಚ್ಚು ಸಂಕಷ್ಟಗಳನ್ನು  ಎದುರಿಸುವಂತಾಗಿದೆ. ಅದ್ದರಿಂದ ಪ್ರತಿಯೊಬ್ಬರೂ ನೆಟ್ಟು ಪಾಲನೆ ಮಾಡಬೇಕು. ಯಾರು ಸರ್ಕಾರವನ್ನು ನಂಬಿ ಕುಳಿತುಕೊಳ್ಳಬಾರದು ನಾಗರೀಕ ಕರ್ತವ್ಯಗಳನ್ನು ಎಲ್ಲರೂ ನಿಭಾಯಿಸಬೇಕಾಗಿದೆ.  ಸರಕಾರ ಕೋಟಿ ಗಟ್ಟಲೆ ಖರ್ಚು ಮಾಡಿ ಸಭಾಭವನ, ರಂಗಮಂದಿರ ನಿರ್ಮಾಣ ಮಾಡಿದ್ದು ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಹಾಲಾಗಿ ಹೋಗುತ್ತಿದೆ. ಅದೇ ಹಣವನ್ನು ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆ  ಮಾಡಲು ನೀಡಿದರೆ ಜಿಲ್ಲೆಯು ಹಚ್ಚು ಹಸಿರಾಗಿ ಕಂಗೊಳಿಸುತ್ತದೆ ಎಂದು ಹೇಳಿದರು.    

ನಗರಸಭಾ ಸದಸ್ಯೆ  ಅನಿತಾ ಗಡ್ಡಿ ಅವರು ಮಾತನಾಡಿ,  ಗಿಡಗಳನ್ನು ಬೆಳಿಸಿ ನಾಡನ್ನು  ಉಳಿಸಬೇಕು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಪಾಲನೆ ಮಾಡಿದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ಹೇಳಿದರು.  

ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಯದ ಪ್ರಾಚಾರ್ಯರಾದ  ಶ್ರೀಮತಿ ಹೊಸಮನಿ ಅವರು ಮಾತನಾಡಿ, ಪರಿಸರ ದಿನವು ಒಂದೇ ದಿನಕ್ಕೆ ಸೀಮಿತವಾಗಬಾರದು ನಮ್ಮ ಕಾಲೇಜಿನ  ಎನ್‌.ಎಸ್‌. ಎಸ್‌. ವಿಧ್ಯಾರ್ಥಿಗಳು ಪರಿಸರ ರಕ್ಷಣೆಗೆ ಸದಾ ಮುಂದೆ ಇರುವದರಿಂದ ನಾವುಗಳು ಕೂಡಾ ಪರಸರ ರಕ್ಷಣೆಗೆ ಪೂರ್ಣ ಪ್ರಮಾಣದ ಕೆಲಸ ಮಾಡೋಣ ಎಂದು ಹೇಳಿದರು.  

ಗೌರವಾಧ್ಯಕ್ಷ ಹಿರೇಮಠ  ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಯಲ್ಲಿ ಮಗುವಿಗೆ  ಸಂಸ್ಕಾರ ನೀಡಿದಂತೆ, ಗಿಡಗಳಿಗೆ ನೀರು, ಗೊಬ್ಬರ ನೀಡಿ ಚೆನ್ನಾಗಿ ಆರೈಕೆಯೊಂದಿಗೆ ಪೋಷಣೆ ಮಾಡಬೇಕು ಎಂದು ಹೇಳಿದರು.  

ಈ ಸಂದರ್ಭದಲಿ  ವಿದ್ಯಾಗಣಪತಿ ಸೇವಾ ಟ್ರಸ್ಟ್‌  ಅಧ್ಯಕ್ಷರಾದ ಮಂಜುನಾಥ ಮತ್ತೂರ, ಉಪಾಧ್ಯಕ್ಷರಾದ ವಿಶ್ವನಾಥ ಟೆಂಗಿನಕಾಯಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಸಹಕಾರ್ಯದರ್ಶಿಗಳಾದ  ಮಂಜುನಾಥ ಕುಲಕರ್ಣಿ, ಖಜಾಂಚಿ ಮಲ್ಲೇಶ್ ವಗ್ಗನವರ, ಟ್ರಸ್ಟ್‌ನ ಉದ್ಯಾನವನ  ಸಮಿತಿಯ ಶಂಕರಯ್ಯ ಕೂಡ್ಲಪ್ಪನವರ, ಮಂಜುಳಾ ಬ್ಯಾಹಟ್ಟಿ  ಮುಖ್ಯ ಅತಿಥಿಗಳಾಗಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ,      ಉಪನ್ಯಾಸಕರಾದ ಗಂಗನ ಗೌಡ್ರ ಮತ್ತು  ಭೋದಕ-ಭೋದಕೇತರ  ಸಿಬ್ಬಂದಿ, ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸೇವಾ ಘಟಕದ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ  ಶ್ರೀ  ವಿದ್ಯಾ ಗಣಪತಿ ದೇವಸ್ಥಾನದ ಸುತ್ತು ಮುತ್ತಲಿನ ಲೇಓಟ್‌ನ ನಿವಾಸಿಗಳು, ಹಿರಿಯ ನಾಗರೀಕರು, ವಾಯು ವಿಹಾರಿಗಳು,  ಪರಿಸರ ಪ್ರೇಮಿಗಳು ವಿಶ್ವ ಪರಿಸರ ದಿನದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುಮಾರು 350-400 ಗಿಡಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದರು.