ಆರೋಗ್ಯವಂತರಾಗಲು ಪರಿಸರ ಸಂರಕ್ಷಣೆ ಉಳಿಸಿ : ಶರಣಬಸಪ್ಪ ದಾನಕೈ
Protect the environment to stay healthy: Sharanabasappa Danakai
ಯಲಬುರ್ಗಾ 01: ಸಮಾಜದಲ್ಲಿರುವ ಜನತೆ ಉತ್ತಮ ಆರೋಗ್ಯವಂತರಾಗಲು ನಾವು ಪರಿಸರ ಸಂರಕ್ಷಣೆಯಲ್ಲಿ ನಿರಂತರವಾಗಿ ಗಿಡ ಮರಗಳನ್ನು ನೆಡುವದರ ಜೋತೆಗೆ ಸಂಪೂರ್ಣವಾಗಿ ಬೆಳೆಸಲು ಮುಂದಾಗಬೇಕು ಅಂದಾಗ ಪರಿಸರ ಉಳಿಯಲು ಸಾದ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ( ವಾಸುದೇವ ಮೇಟಿ ಬಣ) ಯಲಬುರ್ಗಾ ತಾಲೂಕಾ ಅದ್ಯಕ್ಷ ಶರಬಸಪ್ಪ ದಾನಕೈ ಅವರು ತಮ್ಮ 56 ನೆ ವರ್ಷದ ಹುಟ್ಡು ಹಬ್ಬವನ್ನು ಕೆಕ್ ಕಟ್ಟ ಮಾಡಲಾರದೆ, ಗಿಡ ಮರಗಳನ್ನು ಬೆಳೆಸಬೇಕು ಎಂಬ ಸಂದೇಶದ ಮೂಲಕ ಜೂ.1 ರಂದು ಸರಳವಾಗಿ ಹೊಲದ ಬದುವಿನಲ್ಲಿ ದಾನಕೈ ಕುಟುಂಬದವರು ಸೇರಿ ಗಿಡ ಮರಗಳನ್ನು ಹಚ್ಚುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಪರಿಸರ ದಿನಾಚರಣೆ ಎಂದು ಭಾವಿಸಿ ಗಿಡ ಮರಗಳನ್ನು ನೆಡುವ ಮೂಲಕ ಆಚರಿಸಿದರು. ಕೇವಲ ಪರಿಸರ ದಿನಾಚರಣೆ ಅಂಗವಾಗಿ ಗಿಡ ಮರಗಳನ್ನು ನೆಡುವ ಬದಲು ತಮ್ಮ ಮನೆಯಲ್ಲಿರುವ ಕುಟುಂಬದವರ ಹುಟ್ಟು ಹಬ್ಬ,ಮದುವೆ ಇನ್ನಿತರ ಯಾವದೇ ಕಾರ್ಯಕ್ರಮವಿರಲಿ ಅಂದು ಎರಡು ಗಿಡಗಳನ್ನಾದರು ನೆಡುವ ಸಂಪ್ರದಾಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಪರಿಸರವಾಗಲು ಸಾದ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 