ಆರೋಗ್ಯವಂತರಾಗಲು ಪರಿಸರ ಸಂರಕ್ಷಣೆ ಉಳಿಸಿ : ಶರಣಬಸಪ್ಪ ದಾನಕೈ
Protect the environment to stay healthy: Sharanabasappa Danakai
ಯಲಬುರ್ಗಾ 01: ಸಮಾಜದಲ್ಲಿರುವ ಜನತೆ ಉತ್ತಮ ಆರೋಗ್ಯವಂತರಾಗಲು ನಾವು ಪರಿಸರ ಸಂರಕ್ಷಣೆಯಲ್ಲಿ ನಿರಂತರವಾಗಿ ಗಿಡ ಮರಗಳನ್ನು ನೆಡುವದರ ಜೋತೆಗೆ ಸಂಪೂರ್ಣವಾಗಿ ಬೆಳೆಸಲು ಮುಂದಾಗಬೇಕು ಅಂದಾಗ ಪರಿಸರ ಉಳಿಯಲು ಸಾದ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ( ವಾಸುದೇವ ಮೇಟಿ ಬಣ) ಯಲಬುರ್ಗಾ ತಾಲೂಕಾ ಅದ್ಯಕ್ಷ ಶರಬಸಪ್ಪ ದಾನಕೈ ಅವರು ತಮ್ಮ 56 ನೆ ವರ್ಷದ ಹುಟ್ಡು ಹಬ್ಬವನ್ನು ಕೆಕ್ ಕಟ್ಟ ಮಾಡಲಾರದೆ, ಗಿಡ ಮರಗಳನ್ನು ಬೆಳೆಸಬೇಕು ಎಂಬ ಸಂದೇಶದ ಮೂಲಕ ಜೂ.1 ರಂದು ಸರಳವಾಗಿ ಹೊಲದ ಬದುವಿನಲ್ಲಿ ದಾನಕೈ ಕುಟುಂಬದವರು ಸೇರಿ ಗಿಡ ಮರಗಳನ್ನು ಹಚ್ಚುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಪರಿಸರ ದಿನಾಚರಣೆ ಎಂದು ಭಾವಿಸಿ ಗಿಡ ಮರಗಳನ್ನು ನೆಡುವ ಮೂಲಕ ಆಚರಿಸಿದರು. ಕೇವಲ ಪರಿಸರ ದಿನಾಚರಣೆ ಅಂಗವಾಗಿ ಗಿಡ ಮರಗಳನ್ನು ನೆಡುವ ಬದಲು ತಮ್ಮ ಮನೆಯಲ್ಲಿರುವ ಕುಟುಂಬದವರ ಹುಟ್ಟು ಹಬ್ಬ,ಮದುವೆ ಇನ್ನಿತರ ಯಾವದೇ ಕಾರ್ಯಕ್ರಮವಿರಲಿ ಅಂದು ಎರಡು ಗಿಡಗಳನ್ನಾದರು ನೆಡುವ ಸಂಪ್ರದಾಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಪರಿಸರವಾಗಲು ಸಾದ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 