ಭಕ್ತ ಕನಕದಾಸರ ಕಂಚಿನ ಪುತ್ಥಳಿಯ ಮೆರವಣಿಗೆ
Procession of the bronze statue of devotee Kanakadasa
ಹಾನಗಲ್ 13: ನಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ದಾಸಶ್ರೇಷ್ಠ ಭಕ್ತ ಕನಕದಾಸರ ಕಂಚಿನ ಪುತ್ಥಳಿಯ ಭವ್ಯ ಮೆರವಣಿಗೆ ಸಡಗರ, ಸಂಭ್ರಮದಿಂದ ನೆರವೇರಿತು. ವಿರಕ್ತಮಠದ ಎದುರು ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಶಾಸಕ ಶ್ರೀನಿವಾಸ ಮಾನೆ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಸೇರಿದಂತೆ ನಾನಾ ಜಾನಪದ ಕಲಾತಂಡಗಳು ಮೆರವಣಿಗೆಯ ಸಂಭ್ರಮ ಹೆಚ್ಚಿಸಿದ್ದವು. ವಿರಕ್ತಮಠದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸ ಬಸ್ ನಿಲ್ದಾಣದ ಬಳಿಯ ಕನಕ ವೃತ್ತ ತಲುಪಿ ಮುಕ್ತಾಯಗೊಂಡಿತು. ಕೆಲವೇ ದಿನಗಳಲ್ಲಿ ಕನಕ ವೃತ್ತದಲ್ಲಿ ಪುತ್ಥಳಿಯ ಪ್ರತಿಷ್ಟಾಪನೆ ನಡೆಯಲಿದೆ.
ಕಾಗಿನೆಲೆಯ ಅಮೋಘಸಿದ್ದೇಶ್ವರ ಸ್ವಾಮಿಜಿ, ಮುಖಂಡರಾದ ಮಹೇಶ ಪವಾಡಿ, ವಿನಾಯಕ ಕುರುಬರ, ಮಾಲತೇಶ ಗಂಟೇರ, ರಾಜೇಂದ್ರ ಹಾವೇರಣ್ಣನವರ, ದಾನಪ್ಪ ಗಂಟೇರ, ಭೋಜರಾಜ ಕರೂದಿ, ಸುರೇಶ ದೊಡ್ಡಕುರುಬರ, ಪ್ರಕಾಶ ತಳ್ಳಳಿ, ಮಾಲತೇಶ ಬ್ಯಾಗವಾದಿ, ಅಶೋಕ ದೇವಗಿರ, ಕೃಷ್ಣಾ ಮಾಸನಕಟ್ಟಿ, ರಾಮಚಂದ್ರ ಹೆಗಡೆ, ಸಂದೀಪ ಪಾಟೀಲ, ರಾಮಚಂದ್ರ ಹೊಸಮನಿ, ಜಿ.ಎಸ್.ಕುರುಬರ, ನಿಂಗಪ್ಪ ಗಾಜಿಯವರ, ರಾಜಶೇಖರ ಕಟ್ಟೇಗೌಡ್ರ, ಕಲ್ಯಾಣಕುಮಾರ ಶೆಟ್ಟರ, ಕೃಷ್ಣ ಈಳಿಗೇರ, ರವೀಂದ್ರ ದೇಶಪಾಂಡೆ, ಆದರ್ಶ ಶೆಟ್ಟಿ ಸೇರಿದಂತೆ ಇನ್ನೂ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 