ಮಿರ್ಜಾಪುರ ವಿಂಧ್ಯವಾಸಿನಿಗೆ ಪ್ರಿಯಾಂಕಾ ನಮನ
ಮಿರ್ಜಾಪುರ, ಮಾ 19: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಉದ್ದೇಶ ಹೊಂದಿರುವ ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ‘ಗಂಗಾ ಯಾತ್ರೆ’ ಮುಂದುವರಿಸಿದ್ದು, ಮಂಗಳವಾರ ಮಿರ್ಜಾಪುರ ತಲುಪಿದರು.
ರಸ್ತೆ ಮಾರ್ಗವಾಗಿ ವಿಂಧ್ಯವಾಸಿನಿ ದೇವಾಲಯ ತಲುಪಿದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾಂತಿ ಶರೀಫ್ ದರ್ಗಾಕ್ಕೆ ಭೇಟಿ ನೀಡಿದರು. ಸುಮಾರು 5 ಗಂಟೆ ತಡವಾಗಿ ತಲುಪಿದ್ದರಿಂದ ಈ ಮೊದಲೇ ಯೋಜಿಸಿದ್ದ ವಿಶ್ವವಿಖ್ಯಾತ ತ್ರಿಕೋನ ಪರಿಕ್ರಮ ಕೈಬಿಡಲಾಯಿತು.
ಪ್ರಿಯಾಂಕಾ ಭೇಟಿ ಹಿನ್ನೆಲೆಯಲ್ಲಿ ವಿಂಧ್ಯವಾಸಿನಿ ದೇವಾಲಯಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಾಬಲ್ಯವಿರುವೆಡೆ ಗಂಗಾ ಯಾತ್ರೆ ಕೈಗೊಂಡಿರುವ ಪ್ರಿಯಾಂಕಾ, ಪ್ರಯಾಗ್ ರಾಜ್ ನಿಂದ ವಾರಾಣಸಿಗೆ ಗಂಗಾ ನದಿ ಮಾರ್ಗವಾಗಿ ಭೇಟಿ ನೀಡಲಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 