5ಲಕ್ಷ ರೂ.ಗಳ ಅನುದಾನ ನೀಡಬೇಕೆಂದು ಅಧ್ಯಕ್ಷ ಶೇಖಪ್ಪ ಒತ್ತಾಯ
ಲೋಕದರ್ಶನ ವರದಿ
ಕಂಪ್ಲಿ 16: ಭೋವಿ ಹಿಂದುಳಿದ ಸಮಾಜವಾಗಿದೆ ಸಮಾಜದ ಸಮುದಾಯ ಭವನ ನಿಮರ್ಾಣಕ್ಕೆ ಶಾಸಕರು ಭರವಸೆ ನೀಡಿದಂತೆ 5ಲಕ್ಷ ರೂ.ಗಳ ಅನುದಾನ ನೀಡಬೇಕೆಂದು ಎಂದು ಇಲ್ಲಿನ ಭೋವಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಶೇಖಪ್ಪ ಒತ್ತಾಯಿಸಿದರು ಇಲ್ಲಿನ 10ನೇವಾರ್ಡ್ ಭೋವಿ ಕಾಲೋನಿಯಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತ್ಯುತ್ಸವ ನಿಮಿತ್ತ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ಬೈಕ್ ರ್ಯಾಲಿಗೆ ಚಾಲನೆ ನೀಡಿ, ಭೋವಿ ಸಮುದಾಯ ಹಿಂದುಳಿದ ಸಮಾಜವಾಗಿದೆ. ಇಲ್ಲಿನ 5ನೇವಾಡರ್್ನಲ್ಲಿ ಸಮುದಾಯ ಭವನ ನಿಮರ್ಾಣ ಅನುದಾನ ಕೊರತೆಯಿಂದಸಮುದಾಯ ಭವನ ಅಪೂರ್ಣಗೊಂಡಿದೆ. ಶಾಸಕ ಜೆ.ಎನ್.ಗಣೇಶ್ ಅವರು ಸಮುದಾಯ ಭವನ ನಿರ್ಮಾಣಕ್ಕೆ 5ಲಕ್ಷ ರೂ.ಗಳ ಅನುದಾನ ಒದಗಿಸುವ ಭರವಸೆ ನೀಡಿದಂತೆ ಅನುದಾನ ಒದಗಿಸುವಲ್ಲಿ ಮುಂದಾಗಬೇಕು ಎಂದರು.
ಬೈಕ್ ರ್ಯಾಲಿ ಪ್ರಮುಖ ಬೀದಿಗಳಲ್ಲಿ ಸಾಗಿ ವಿ.ಶೇಖಪ್ಪ ಇವರ ಸಾಮಿಲ್ ಆವರಣದಲ್ಲಿ ಸಮಾವೇಶಗೊಂಡ ನಂತರ ಸಂಘಟನಾ ಸಭೆ ಜರುಗಿತು. ಸಂಘಟನಾ ಸಭೆಯಲ್ಲಿ ಭೋವಿ ಸಮಾಜದ ಪ್ರಮುಖರಾದ ನಂ.10 ಮುದ್ದಾಪುರವಿ.ವೆಂಕಟೇಶ್, ಗೋವಿಂದರಾಜ್, ವಿ.ಗೋವಿಂದರಾಜ್, ಸತ್ಯಪ್ಪ, ಶ್ರೀನಿವಾಸ್, ವಿ.ವೆಂಕಟರಮಣ, ಗುರ್ರಪ್ಪ, ವಿ.ಮೌನೇಶ್, ಸಂಜೀವಪ್ಪ, ವಿ.ನಾಗರಾಜ ರಾಮಸಾಗರ ಸೇರಿ ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ ಭೋವಿ ಸಮಾಜದವರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 