ತುಂಡಾಗಿ ಬಿದ್ದ ಶಾಸನಸದ ಸಂರಕ್ಷಣೆ

ತುಂಡಾಗಿ ಬಿದ್ದ ಶಾಸನಸದ ಸಂರಕ್ಷಣೆ Preservation of a fragmented inscription

ಬಾಗಲಕೋಟಿ 29-  ತಾಲೂಕಿನ ಕಲಾದಗಿ ಗ್ರಾಮದಲ್ಲಿ ಅಗಸಿ ಬಾಗಿಲಿನ ಮುಂದೆ ಎರಡು ತುಂಡಾಗಿ ಬಿದ್ದಿರುವ ಶಾಸನವನ್ನು ಇಂದು ಕಲಾದಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂರಕ್ಷಿಸಿ ಇಡಲಾಯಿತು.  

ಕನ್ನಡ ವಿಶ್ವವಿದ್ಯಾಲಯದ ಹಂಪಿಯ "ಶಾಸನ ಸಂಪುಟ-ಬಾಗಲಕೋಟೆ ಜಿಲ್ಲೆ-9" ರಲ್ಲಿ ಈ ಶಾಸನದ ಸಾರಾಂಶ ದಾಖಲಿಸಿದ್ದಾರೆ." ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತೇಶ ಎಚ್‌.ಬಿ ಸರ್, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸರೋಜನಿ ಹೋಸಕೇರಿ ಮೇಡಮ್, ಹಿರಿಯ ಪತ್ರಕರ್ತರಾದ  ದ.ರಾ.ಪುರೋಹಿತ ಸರ್ ಅವರ ನೇತೃತ್ವದಲ್ಲಿ ಈ ಕೆಲಸ ನೇರವೇರಿದ್ದು ತುಂಬಾ ಸಂತೋಷವಾಗಿದೆ.  ಈ ಸಂದರ್ಭದಲ್ಲಿ ಡಾ.ಲೋಕಣ್ಣ ಭಜಂತ್ರಿ, ಮೌಲಾಸಾಬ ಮುಲ್ಲಾ, ಡಾ.ಪುಂಡಲೀಕ ಹುನ್ನಳ್ಳಿ, ಶ್ರೀದೇವಿ ಮುಂಡಗನೂರ, ಸಿ.ವಾಯ್‌. ಮೆನಸಿನಕಾಯಿ,  ಯಲ್ಲಪ್ಪ ಶಿರಗುಂಪಿ, ವಿದ್ಯಾರ್ಥಿ ಸುನೀಲ ಬಡಿಗೇರ ಹಾಗೂ ಪತ್ರಕರ್ತರಾದ ನೀತೀಶ್ ಪಾಟೀಲ, ಸಿಕಂದರ ಬಾವಾಖಾನ, ಚಂದ್ರಶೇಖರ, ತೇಲಿ ಉಪಸ್ಥಿತರಿದ್ದರು.