ವಿವಿಧ ಜಯಂತಿಗಳ ಅರ್ಥಪೂರ್ಣ ಆಚರಣೆಗೆ ಸಿದ್ಧತೆ -ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್

ವಿವಿಧ ಜಯಂತಿಗಳ  ಅರ್ಥಪೂರ್ಣ ಆಚರಣೆಗೆ ಸಿದ್ಧತೆ -ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್ Preparations for meaningful celebrations of various jayantis - Additional Deputy Commissioner Dr. Na


        ಹಾವೇರಿ 12 :  ಜಿಲ್ಲಾಡಳಿತದಿಂದ   ದೇವರ ದಾಸಿಮಯ್ಯ,  ಅಗ್ನಿಬನ್ನಿರಾಯ ಹಾಗೂ ಭಗವಾನ್ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌. ಅವರು ಸೂಚನೆ ನೀಡಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ದೇವರ ದಾಸಿಮಯ್ಯ, ಶ್ರೀ ಅಗ್ನಿಬನ್ನಿರಾಯ ಹಾಗೂ ಭಗವಾನ್ ಮಹಾವೀರ ಜಯಂತಿ ಕುರಿತು ಪೂರ್ವಭಾವಿ ಸಭೆ  ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿ ಅನ್ವಯ ಜಯಂತಿಗಳ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು. 

ಶಿಷ್ಟಾಚಾರದ ಅನುಸಾರ ಆಮಂತ್ರಣ ಪತ್ರಿಕೆ, ಬ್ಯಾನರ್, ಉಪನ್ಯಾಸಕರ ಆಯ್ಕೆ, ನೀರು, ಉಪಹಾರ, ಆಸನ, ವೇದಿಕೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಶಾಲಾ-ಕಾಲೇಜು ಹಾಗೂ ಗ್ರಾಮ ಪಂಚಾಯತಿಗಳಲ್ಲಿ  ಈ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗೆ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು 

ಮಾರ್ಚ್‌ 24 ರಂದು  ದೇವರದಾಸಿಮಯ್ಯ ಜಯಂತಿ ಹಾಗೂ  ಮಾ. 27 ರಂದು  ಅಗ್ನಿಬನ್ನಿರಾಯ ಜಯಂತಿ ಬೆಳಿಗ್ಗೆ 11 ಗಂಟೆಗೆ ಹಾವೇರಿ ನಗರದ ಗಾಂಧಿ ಭವನದಲ್ಲಿ ಆಚರಣೆ ನಿರ್ಣಯಿಸಲಾಯಿತು. 

ಭಗವಾನ್ ಮಹಾವೀರ ಜಯಂತಿಯನ್ನು ಮಾರ್ಚ್‌ 31 ರ ಬದಲಾಗಿ ಮಾರ್ಚ್‌ 30 ರಂದು  ಆಚರಣೆಗೆ  ಸರ್ಕಾರಕ್ಕೆ  ರಾಜ್ಯಮಟ್ಟದಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.  ಸರ್ಕಾರದ ಆದೇಶದ ನೋಡಿಕೊಂಡು ಭಗವಾನ್ ಮಹಾವೀರ ಆಚರಣೆ ದಿನಾಂಕ ನಿಗದಿಗೆ ಇಲಾಖೆಗೆ ತಿಳಿಸಲಾಗುವುದು ಎಂದು ಸಮಾಜದ ಮುಖಂಡರಾದ ಚಂದ್ರನಾಥ ಕಳಸೂರ ಅವರು ಸಭೆಗೆ ತಿಳಿಸಿದರು. 

ಸಮಾಜದ ಮುಖಂಡರುಗಳು ಜಯಂತಿಗಳ  ಆಚರಣೆ ಬಗ್ಗೆ ಚರ್ಚಿಸಿ ಸಲಹೆಗಳನ್ನು ನೀಡಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ ಅವರು ಜಂತಿಗಳ ಆಚರಣೆ ಕುರಿತು ಸರ್ಕಾದ ಮಾರ್ಗಸೂಚಿಗಳ ಬಗ್ಗೆ  ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ  ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.