ಲೋಕ ಅದಾಲತ್‌ದ ಸದುಪಯೋಗ ಪಡೆದುಕೊಳ್ಳಿ: ನ್ಯಾ. ರೂಪಾ ಚಿನಿವಾರ

ಲೋಕ ಅದಾಲತ್‌ದ ಸದುಪಯೋಗ ಪಡೆದುಕೊಳ್ಳಿ: ನ್ಯಾ. ರೂಪಾ ಚಿನಿವಾರ Preliminary meeting on the Lok Adalat

ಲೋಕದರ್ಶನ ವರದಿ

ಲೋಕ ಅದಾಲತ ಕುರಿತು ಪೂರ್ವಿಭಾವಿ ಸಭೆ;

ಕಾಗವಾಡ ೧೬: ಜುಲೈ ೧೧ ರಂದು ತಾಲೂಕಿನ ಸಿವ್ಹಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದ್ದು, ಕಕ್ಷಿದಾರರು ಮತ್ತು ಸಾರ್ವಜನಿಕರು ಇದರ ಲಾಭ ಪಡದುಕೊಳ್ಳಬೇಕು ಎಂದು ನ್ಯಾಯಾಧೀಶರಾದ ರೂಪಾ ಚಿನಿವಾರ ತಿಳಿಸಿದ್ದಾರೆ.

ಅವರು, ಸೋಮವಾರ ದಿ. ೧೫ ರಂದು ಸಂಜೆ ಪಟ್ಟಣದ ತಾಲೂಕಾ ನ್ಯಾಯಲಯದ ಆವರಣದಲ್ಲಿ ನಡೆದ ಲೋಕ ಅದಾಲತ್ ಕುರಿತು ತಾಲೂಕಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಜುಲೈ ೧೧ ರಂದು ನಡೆಯಲಿರುವ ಲೋಕ ಅದಾಲತ್‌ನಲ್ಲಿ ನಮ್ಮ ನ್ಯಾಯಾಲಯದಲ್ಲಿ ೧೦೪೦ ಸಿವ್ಹಿಲ್ ಮತ್ತು ಸುಮಾರು ೧೬೦೦ ಕ್ರಿಮಿನಲ್ ದಾವೆಗಳಿವೆ. ಕಕ್ಷಿದಾರರಿಗೆ ಇತರೆ ಎಲ್ಲ ರೀತಿಯ ದಾವೆಗಳ ಕುರಿತು ರಾಜಿ ಸಂಧಾನ ಮಾಡಿಕೊಳ್ಳಲು ಒಳ್ಳೆಯ ಅವಕಾಶವಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಉಪ ತಹಶೀಲ್ದಾರ್ ವಿಜಯಕುಮಾರ ಚೌಗುಲೆ, ಎಎಸ್‌ಐ ಎಸ್.ವ್ಹಿ ಹಂಜಿ, ಉಗಾರ ಪುರಸಭೆ ಮತ್ತು ಐನಾಪೂರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ, ಸಿಡಿಪಿಒ ರವೀಂದ್ರ ಗುದಿಗೆಣ್ಣವರ, ಶಿಕ್ಷಣ ಇಲಾಖೆಯ ಆರ್.ಬಿ ದರೂರ, ಕೆನರಾ ಬ್ಯಾಂಕಿನ ಬಿ. ವಿಜಯಕುಮಾರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ವ್ಹಿ. ನಾಂದ್ರೆ, ಕಾರ್ಯದರ್ಶಿ ಎಂ.ಜಿ. ವಡ್ಡರ, ವಕೀಲಾದ ಬಿ.ಜೆ. ಮೋಳೆ, ವೈ.ಎ. ಡಾಂಗೆ, ಎ.ಬಿ. ಪಾಟೀಲ, ಎಸ್.ಜೆ. ಚೌಗುಲೆ, ಪೋಲಿಸ್ ಸಿಬ್ಬಂದಿ ಪಿ.ಎಂ. ಮಕಾನದಾರ ಸೇರಿದಂತೆ ತಾಲೂಕಿನ ಅಧಿಕಾರಿಗಳು, ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿಗಳ ಉಪಸ್ಥಿತರಿದ್ದರು.