ದುರ್ಗಾ ವೃತ್ತದಲ್ಲಿ ಡಾಂಬರೀಕರಣ ಸಮತಟ್ಟು ಕಾಮಗಾರಿಗೆ ಪ್ರಕಾಶ್ ಕೋಳಿವಾಡ ಚಾಲನೆ
Prakash Koliwad launches asphalting and leveling work at Durga Circle
ರಾಣೇಬೆನ್ನೂರು :16 ಹಾವೇರಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಮತ್ತು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ ಪ್ರದೇಶವೆಂದರೆ ಅದು ರಾಣಿಬೆನ್ನೂರು ಮಾತ್ರ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಅವರು ಸೋಮವಾರ ಜನತಾ ಬಜಾರ್ ಬಳಿಯ ದುರ್ಗಾ ವೃತ್ತದಲ್ಲಿ, ವೃತ್ತ ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ ನಗರ ಮತ್ತು ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧನೆಗೆ ತಮ್ಮ ಅನುದಾನ ನೀಡಿದ್ದೇವೆ. ರೈತರ ಕೃಷಿಗಾಗಿ ಮತ್ತು ಅದರ ಅಭಿವೃದ್ಧಿಗಾಗಿ ಉಪಗ್ರಹ ಆಧಾರಿತ ತಂತ್ರಜ್ಞಾನದ ಮೂಲಕ ರೈತರ ಅಭಿವೃದ್ಧಿಗೆ ಕ್ರಿಯಾಯೋಜನರುಪಿಸಿದ್ದೇವೆ. ಇದೀಗ ನಗರದಲ್ಲಿ ಕೆಲವು ಭಾಗಗಳಲ್ಲಿ ಸೌಂದರ್ಯೀಕರಣಕ್ಕಾಗಿ ಮುಂದಾಗಿದ್ದೇವೆ ಎಂದರು.
ಎಷ್ಟೇ ಬೆಳವಣಿಗೆ ಕಂಡರು ನಗರದ ನಾಗರಿಕರು ಎಲ್ಲ ರೀತಿಯ ಯೋಜನೆಗಳನ್ನು ಜಾರಿಗೆ ತರಲು ಶಾಸಕರೊಂದಿಗೆ ಸಹಕಾರ ನೀಡಬೇಕು. ಹಿಂದಿನಿಂದಲೂ ಈ ವೃತ್ತದಲ್ಲಿ ಅನೇಕ ರೀತಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದರೆ ಸಮತಟ್ಟಾದ ಸ್ಥಳವಿಲ್ಲದೆ, ಬೀದಿ ಬದಿ ವ್ಯಾಪಾರಿಗಳಿಂದ ನಾಗರಿಕರು ತಂದೆ ಅನುಭವಿಸುವಂತಹಾಗಿತ್ತು. ಆದ್ದರಿಂದ ಸಾರ್ವಜನಿಕರ ಬೇಡಿಕೆ ಮೇರೆಗೆ ಮತ್ತು ಸೌಂದರ್ಯೀಕರಣದ ಅನುಕೂಲತೆಗಾಗಿ ವೃತ್ತವು ದಾಂಬರೀಕರಣದ ಸಮತಟ್ಟು ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ, ಮಾಜಿ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಶೇರುಖಾನ್ ಕಾಬೂಲಿ, ಪ್ರೊ, ಬಿ.ಬಿ. ನಂದ್ಯಾಲ, ಶೀರೀನತಾಜ್ ಶೇಖ್, ಫಕ್ಕೀರಗೌಡ ಪಾಟೀಲ, ಶ್ರೀಮತಿ ನೂರಜಹಾನ್ ನಂದ್ಯಾಲ, ನಾಗರಾಜ್ ಮರಿಯಮ್ಮನವರ, ಜಯದೇವಯ್ಯ ಸುರಳಿಕೆರಿಮಠ, ಇರ್ಫಾನ್ ದಿಡಗೂರ, ಮಲ್ಲೇಶಪ್ಪ ಮದ್ಲೇರ, ಸೇರಿದಂತೆ ಮತ್ತಿತರ ಗಣ್ಯರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 