ಪವರ್ ಲಿಫ್ಟಿಂಗ್ ಸಾಧಕ ಕಿರಣ್ ಗುಂಗೇರ: ಮಂಗಳೂರು ಜಿಲ್ಲಾಡಳಿತದಿಂದ ಅಭಿನಂದನಾ ಸನ್ಮಾನ
Powerlifting champion Kiran Gungera: Congratulatory award from Mangalore District Administration
ರಾಣೇಬೆನ್ನೂರು 6 : ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಆರೇ ಮಲ್ಲಾಪುರ ಗ್ರಾಮದ, ಯುವ ಕ್ರೀಡಾ ಪ್ರತಿಭೆ, ಕಿರಣ್ ಹಾಲೇಶ್ ಗುಂಗೇರ ಅವರು ಮಾಡಿದ ಪವರ್ ಲಿಫ್ಟಿಂಗ್ ಸಾಧನೆಗಾಗಿ ಮಂಗಳೂರು ಜಿಲ್ಲಾಡಳಿತವು, ಅಭಿನಂದಿಸಿ ಸನ್ಮಾನಿಸಿ ಗೌರವಿಸಿದೆ. ಮಂಗಳೂರು ನೇತ್ರಾವತಿ ಭವನದಲ್ಲಿ ಡಿ ದೇವರಾಜ ಅರಸು ಅವರ 110ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಮತಿ ಮಮತಾ ಡಿ.ಎಸ್. ಗಟ್ಟಿ ಅವರು ಸಾರ್ವಜನಿಕವಾಗಿ ಗೌರವಿಸಿ ಪ್ರಶಸ್ತಿ ಪದಕವನ್ನಿತ್ತು ಸನ್ಮಾನಿಸಿದರು.
ಕಿರಣ್ ಗುಂಗೇರ ಅವರು, ಅತ್ಯುತ್ತಮ ಪವರ್ ಲಿಫ್ಟಿಂಗ್ ಕ್ರೀಡಾಪಟುವಾಗಿದ್ದು, ಇತ್ತೀಚೆಗೆ ಪಂಜಾಬ್ ರಾಯತ್ ಬಹಾರ ಯುನಿವರ್ಸಿಟಿಯಲ್ಲಿ ನಡೆದ 31ನೇ ಆಲ್ ಇಂಡಿಯಾ ನ್ಯಾಷನಲ್ ಪವರ್ ಲಿಫ್ಟಿಂಗ್ ಸ್ಪರ್ಧೆ 74 ಕೆಜಿ ವಿಭಾಗದ ಬೆಂಚ್ ಪ್ರೆಸ್ ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, , ವಸತಿ ನಿಲಯದ ಅಧಿಕಾರಿಗಳಾದ ಹೇಮಂತಕುಮಾರ, ಬಿಂದಿಯಾ ಎನ್, ನಾಯಕ, ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಹಾಗೂ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 