ಅಂಬೇಡ್ಕರ್ ಪುಸ್ತಕ ಮೇಳದ ಪೋಸ್ಟರ್ಗಳ ಬಿಡುಗಡೆ

ಅಂಬೇಡ್ಕರ್ ಪುಸ್ತಕ ಮೇಳದ ಪೋಸ್ಟರ್ಗಳ ಬಿಡುಗಡೆ Posters for Ambedkar Book Fair released

ವಿಜಯಪುರ 01 : ಏಪ್ರಿಲ್ 10 ರಿಂದ 14 ವರೆಗೆ ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಪೋಸ್ಟರ್ಗಳನ್ನು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುಸ್ತಕ ಮೇಳದಲ್ಲಿ ಜಿಲ್ಲೆಯ ಜನರು, ಸಾಹಿತ್ಯಾಸಕ್ತರು, ಓದುಗರು ಪಾಲ್ಗೊಂಡು ಪುಸ್ತಕ ಮೇಳವನ್ನು ಯಶಸ್ವಿಗೊಳಿಸುವಂತೆ ಕೋರಿದರು. ಮೇ ಸಾಹಿತ್ಯ ಬಳಗದ ಚೆನ್ನು ಕಟ್ಟಿಮನಿ, ಸೋಮು ರಣದೇವಿ, ಶಿವರಾಜ ಕಟ್ಟಿಮನಿ, ಅಪ್ಪು ಚಿನಗುಂಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.