ನಾಗತಿಹಳ್ಳಿ ಚಂದ್ರಶೇಖರಿಂದ ಅಂಚೆ ಚೀಟಿ ಬಿಡುಗಡೆ

Postage stamp release from Nagatihalli Chandrasekhar

ನಾಗತಿಹಳ್ಳಿ ಚಂದ್ರಶೇಖರಿಂದ ಅಂಚೆ ಚೀಟಿ ಬಿಡುಗಡೆ

ಕೊಪ್ಪಳ  17: ಕೊಪ್ಪಳ ಅಂಚೆ ಕಛೇರಿಯಲ್ಲಿ ಎಲ್ಲರನ್ನೂ ಗೌರವಿಸುವ ಮನಸುಗಳಿವೆ ಭಾವಚಿತ್ರ ಇರುವ ಅಂಚೆ ಚೀಟಿಯನ್ನು  ಅನಾವರಣಗೊಳಿಸುವ ಮೂಲಕ ತಮ್ಮಪ್ರೀತಿಯನ್ನು ತೋರಿಸಿದ್ದಾರೆ.  ಇದನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.  ಅವರು ಮಾತನಾಡಿಈ ಮೈ ಸ್ಟ್ಯಾಂಪ್ ನ್ನು ತಯಾರಿಸಲು ಮತ್ತು ನನಗೆ ನೀಡಲು ಒಂದು ವಾರದಿಂದ ಶ್ರಮಪಟ್ಟಿರುವ ಅಂಚೆಯವರ ಹೃದಯವಂತಿಕೆಗೆ ನಾನು ಕೃತಜ್ಞನಾಗಿದ್ದೇನೆ ಊರಿಗೆ ಬಂದವರನ್ನು ಗೌರವಿಸುವ ಎಡೆಯಿಲ್ಲದ ಈ ಪ್ರೀತಿಗೆ ತುಂಬಾ ಸಂತೋಷಪಟ್ಟಿದ್ದೇನೆ.ಕನ್ನಡದ ಸಾಹಿತಿ ಮತ್ತು ಕನ್ನಡ ಚಿತ್ರರಂಗದ ನಿರ್ದೇಶಕನಾದ ನನಗೆ ಸಂದ ಈ ಗೌರವಕ್ಕೆ ನಾನು ಚಿರಋಣಿ ಎಂದು ಹೇಳಿದರು.ಅಂಚೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವತಿಯಿಂದ ಮೈ ಸ್ಟ್ಯಾಂಪ್ ಸಮರೆ​‍್ಣ ಸಮಾರಂಭದಲ್ಲಿ ಹೇಳಿದರು.ಮೈ ಸ್ಟ್ಯಾಂಪ್ ನ್ನು ಸಮರ​‍್ಿಸುತ್ತ ಸಾಹಿತಿ ಸಾವಿತ್ರಿ ಮುಜುಮದಾರ ನಾಗತಿಹಳ್ಳಿ ಚಂದ್ರಶೇಖರ ಅವರ ಬದುಕು ಬರಹ ಗಳನ್ನು ಕುರಿತು ಮತ್ತು ಅವರ ಚಲನಚಿತ್ರ ಗಳನ್ನು ಆಧರಿಸಿ ಮಾತನಾಡಿದರು.ಅಂಚೆ ನೀರೀಕ್ಷಕರಾದ ಮಹಾಂತೇಶ ತೊಗರಿ ಅವರು ಮೈ ಸ್ಟ್ಯಾಂಪ್ ಕುರಿತು ಮಾಹಿತಿ ನೀಡಿದರು.ಅಂಚೆ ಪಾಲಕರಾದ ನಾಗರಾಜ ಅವರು ನಾಗತಿಹಳ್ಳಿ ಚಂದ್ರಶೇಖರ ಅವರನ್ನು ಸನ್ಮಾನಿಸಿದರು.  ಪೋಸ್ಟ್‌ ಫೋರಂನ ಸದಸ್ಯರಾದ ರಾಜಶೇಖರ ಗೌಡ ಆಡೂರ ಅವರು ಕಿನ್ನಾಳ ಕಲೆಯನ್ನು ಸಾರುವ ವಿಶೇಷ ಸ್ಮರಣೆಕೆಯನ್ನು ನೀಡಿ ಗೌರವಿಸಿದರು.   ಅಂಚೆ ಅಧಿಕಾರಿಗಳಾದ ಜಿ.ಎನ್‌.ಹಳ್ಳಿ, ಸರ್ವೋತ್ತಮ ಉಪಾಧ್ಯಾಯ,ವಾಯ್ ವಾಯ್ ಕೋಳುರು, ಸುಭಾಷ್ ಮೋಟಮ್ಮನವರ,ಹನುಮಂತರಾವ್ ಕುಲಕರ್ಣಿ,ಸಕ್ರಾ​‍್ಪ ಹೂಗಾರ, ಯಲ್ಲಪ್ಪ,ಶರಣಪ್ಪ ಎಲಿಗಾರ,ಗೂಳಪ್ಪ ಸಿರಿಗುಂಪಿ,ರವಿ ಕಾಂತನವರ ಇನ್ನಿತರರು ಉಪಸ್ಥಿತರಿದ್ದರು.