ಕಳಪೆ ಬಿತ್ತನೆ ಬೀಜ ವಿತರಣೆ: ಪರಿಹಾರಕ್ಕೆ ಸಚಿವರ ಭರವಸೆ
Poor seed distribution: Minister promises solution
ರಾಣೇಬೆನ್ನೂರು 23 : ರಾಣೇಬೆನ್ನೂರಿನಲ್ಲಿ ಕಳಪೆ ಬಿತ್ತನೆ ಬೀಜ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವುಗಳು ಮಧ್ಯಸ್ಥಿಕೆ ವಹಿಸಿ ಅನ್ಯಾಯಕ್ಕೊಳಗಾದ ರೈತರಿಗೆ ತುರ್ತು ಪರಿಹಾರ ಕೊಡಿಸಬೇಕೆಂದು ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ ಮತ್ತು ಈರಣ್ಣ ಹಲಗೇರಿ ಇಂದು ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಶಿವಾನಂದ ಎಸ್. ಪಾಟೀಲರಿಗೆ ಮನವಿ ಮಾಡಿದರು.
ಅವರು ಇಂದು ಚಳಗೇರಿ ಟೋಲ್ಬಳಿ ಸಚಿವರನ್ನು ಭೇಟಿಯಾಗಿ ಘಟನೆ ವಿವರಿಸಿದಾಗ ಸಚಿವ ಶಿವಾನಂದ ಪಾಟೀಲ ವಿಷಯವನ್ನು ಜಿಲ್ಲಾಡಳಿತ ಈಗಾಗಲೆ ನನ್ನ ಗಮನಕ್ಕೆ ತಂದಿದೆ ನಿಮ್ಮ ಮನವಿಯನ್ನು ನೋಡಿದ್ದೇನೆ. ‘4’ ಜನ ತಪ್ಪಿಸ್ಥತ ವ್ಯಾಪರಸ್ಥರ ಮೇಲೆ ಎಫ್.ಐ.ಆರ್. ಹಾಕಲಾಗಿದೆ. ನಾಳೆ ಡಿ.ಸಿ.ಗೆ ಜವಾಬ್ದಾರಿಯಿಂದ ಸಭೆ ನಡೆಸಲು ಸೂಚಿಸಿದ್ದೆನೆ ಎಂದರು. ಈ ಸಂದರ್ಭದಲ್ಲಿ ರೈತರು ಸಚಿವರಿಗೆ ಹಸಿರು ಶಾಲು ಹೊದಿಸಿ ಸನ್ಮಾನಿಸಿ ನೊಂದ ರೈತರಿಗೆ ನ್ಯಾಯ ಕೊಡಿಸಲು ವಿನಂತಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 