ಪುರಸಭೆ ಮುಖ್ಯಾಧಿಕಾರಿಯಾಗಿ ಪೂಜಾರ
ಲೋಕದರ್ಶನ
ವರದಿ
ಬ್ಯಾಡಗಿ 13:
ಮಾನ್ಯ ಉಚ್ಚ ನ್ಯಾಯಾಲಯ ನೀಡಿದ್ದ
ತಡೆಯಾಜ್ಞೆಯನ್ನು ತೆರುವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಗೆ ವಿ.ಎಂ.ಪೂಜಾರ
ಅವರನ್ನು ಮುಖ್ಯಾಧಿಕಾರಿಯಾಗಿ ಮುಂದುವರೆಯುವಂತೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.
ವೆಂಕಟೇಶ್ ಆದೇಶಿಸಿದ್ದಾರೆ.
ರಾಜ್ಯ ಸಕರ್ಾರ ಕಳೆದ ಸೆ.12 ರಂದು
ಆದೇಶವೊಂದನ್ನು ಹೊರಡಿಸಿ ವಿ.ಎಂ.ಪೂಜಾರ
ಅವರನ್ನು ವಗರ್ಾವಣೆ ಮೇರೆಗೆ ಸ್ಥಳೀಯ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿತ್ತು, ಆದರೆ ಸಕರ್ಾರದ ಆದೇಶವನ್ನು
ಪ್ರಶ್ನಿಸಿ ಬಿ.ಎ.ನಾಗಲಾಪೂರ
ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು, ಅಜರ್ಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸೆ.18 ರಂದು ಪೂಜಾರ ಅವರ
ವಗರ್ಾವಣೆ ಆದೇಶಕ್ಕೆ ತಡೆಯಾಜ್ಞೆ (ಸ್ಟೇ) ನೀಡಿತ್ತು. ಹೀಗಾಗಿ ಕಳೆದ ಸೆ.25 ರಂದು
ಮತ್ತೆ ಮುಖ್ಯಾಧಿಕಾರಿಯಾಗಿ ಬಿ.ಎ.ನಾಗಲಾಪೂರ
ಅಧಿಕಾರ ವಹಿಸಿಕೊಂಡಿದ್ದರು.
ತಡೆಯಾಜ್ಞೆ
ತೆರವು:ಕಳೆದ ಸೆ.25 ರಂದು
ಮಾನ್ಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬಿ.ಎ.ನಾಗಲಾಪೂರ
ಅವರನ್ನು ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಿಂದ ತೆರವುಗೊಳಿಸಿ, ಮೊದಲಿದ್ದ ವಿ.ಎಂ.ಪೂಜಾರ
ಅವರನ್ನು ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿ ಆದೇಶಿಸಿದ್ದಾರೆ. ಮತ್ತು
ಮೊದಲಿದ್ದ ಬಿ.ಎ.ನಾಗಲಾಪೂರ
ಅವರು ವಾರದೊಳಗಾಗಿ ಇಲಾಖೆಯ ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳಬೇಕು ಮತ್ತು
ಒಂದೇ ವಾರದಲ್ಲಿ ನಾಗಲಾಪೂರ ಅವರಿಗೆ ಬೇರೊಂದು (ಪ್ಲೇಸ್ಮೆಂಟ್) ಸ್ಥಳಕ್ಕೆ ಮರು ವಗರ್ಾವಣೆ ಆದೇಶ
ನೀಡುವಂತೆಯೂ ತಡೆಯಾಜ್ಞೆ ತೆರವು ಆದೇಶದಲ್ಲಿ ಸೂಚಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 