ಪೋಲೀಸ್ ಹುತಾತ್ಮರ ದಿನಾಚರಣೆ ಶಾಂತಿ ಮತ್ತು ಭದ್ರತೆ ಪಾಲನೆಯಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದು

 ಪೋಲೀಸ್ ಹುತಾತ್ಮರ ದಿನಾಚರಣೆ  ಶಾಂತಿ ಮತ್ತು ಭದ್ರತೆ ಪಾಲನೆಯಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದು  Police Martyrs' Day: The role of the police department is important in maintaining peace and securit

ಲೋಕದರ್ಶನ ವರದಿ 

ಪೋಲೀಸ್ ಹುತಾತ್ಮರ ದಿನಾಚರಣೆ  ಶಾಂತಿ ಮತ್ತು ಭದ್ರತೆ ಪಾಲನೆಯಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದು  


ಗದಗ 21:  ಸಮಾಜದ  ಶಾಂತಿ ಮತ್ತು ಭದ್ರತೆ ಪಾಲನೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ್ ಸಿ.ಎಮ್‌. ತಿಳಿಸಿದರು. 

ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಮಂಗಳವಾರ ಗದಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯ ಪಾಲನೆಯಲ್ಲಿ ​‍್ರಾಣಾರೆ್ಪಣ ಮಾಡಿದ ಪೊಲೀಸ್ ನೆನಪಿಗಾಗಿ ಏರಿ​‍್ಡಸಿದ  ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ  ಪೊಲೀಸರಿಗೂ  ಇಂದು ವಿಶೇಷ ದಿನವಾಗಿದೆ.  ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನಾಗರಿಕರ ರಕ್ಷಣೆಗೆ ತಮ್ಮ ಪ್ರಾಣವನ್ನೇ  ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ  ಪೊಲೀಸರ ಬಲಿದಾನ ಹಾಗೂ  ಶೌರ‌್ಯವನ್ನು ಸ್ಮರಿಸುವ ದಿನವಾಗಿದೆ. ಇಂತಹ  ಧೈರ‌್ಯವಂತ ಪೊಲೀಸರನ್ನು ಬೆಳೆಸಿದ ಕುಟುಂಬದವರ ಶಕ್ತಿ ಹಾಗೂ ಸಹನೆಯನ್ನು ನಾವು ಸ್ಮರಿಸುತ್ತೇವೆ. ಇವರ ಧೈರ್ಯ ಹಾಗೂ ಸಾಹಸಗಳು ಮುಂದಿನ ತಲೆಮಾರಿಗೆ ಸ್ಪೂರ್ತಿಯಾಗಲಿ.  ಕರ್ತವ್ಯ ನಿರ್ವಹಣೆಯಲ್ಲಿ ​‍್ರಾಣಾರೆ್ಪಣ ಮಾಡಿದ  ಪೊಲೀಸರ ಸ್ಮರಣೆ ಮಾಡಲು ಪೊಲೀಸ್ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.   ​‍್ರಾಣಾರೆ್ಪಣ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸೋಣ ಎಂದರು.      


ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಅವರು ಮಾತನಾಡಿ ಪೊಲೀಸ್ ಇಲಾಖೆಯ ಪ್ರತಿ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಗಲಿರುಳೆನ್ನದೇ ನಿರಂತರ ಕರ್ತವ್ಯ ನಿರ್ವಹಿಸುವ ಮೂಲಕ  ಬಲಿಷ್ಟ ಹಾಗೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಇದರಿಂದ ಜನರು ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಕರ್ತವ್ಯ ನಿರ್ವಹಣೆಯಲ್ಲಿ ​‍್ರಾಣಾರೆ್ಪಣಗೈದ ಪೊಲೀಸರ ತ್ಯಾಗ, ಸಾಹಸ ಸ್ಮರಣೀಯವಾದದ್ದು ಎಂದರು.  

  

ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ  ರೋಹನ್ ಜಗದೀಶ್ ಮಾತನಾಡಿ ಭಾರತ ಚೀನಾ ಗಡಿಯಲ್ಲಿ  1959 ರಂದು ನಡೆದ ದಾಳಿಯಲ್ಲಿ ದೇಶದ ಪೊಲೀಸರು ಹುತಾತ್ಮರಾದರು. ಇದರ ಸ್ಮರಣಾರ್ಥವಾಗಿ ಪೊಲೀಸ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.       ಹುತಾತ್ಮ  ಪೊಲೀಸರಿಗೆ ಪುಷ್ಪಗುಚ್ಛ ಅರ​‍್ಿಸುವ ಮೂಲಕ ಗೌರವ ಸಮರ​‍್ಿಸಲಾಯಿತು.   


ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಮಹಾಂತೇಶ ಸಜ್ಜನರ, ಡಿವೈಎಸ್‌ಪಿಗಳು, ಸಿಪಿಐ, ವಿವಿಧ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.