ವರ್ತಮಾನಕ್ಕೆ ಸ್ಪಂದಿಸುವ ಕಾವ್ಯ: ಡಾ. ಹೇಮಾ ಪಟ್ಟಣಶೆಟ್ಟಿ

Poetry that responds to the present: Dr. Hema Pattanashetty

ಧಾರವಾಡ 22: ನಗರದ ದಿ ಇನ್‌ಸ್ಟಿಟ್ಯೂಶನ್ ಆಫ್ ಇಂಜಿನಿಯರ​‍್ಸ‌ ಸಭಾಂಗಣದಲ್ಲಿ ಇತ್ತಿಚೇಗೆ ಕವನ ಸಂಕಲನ ಜನಾರ್ಪಣೆ ಜರುಗಿತು. ‘ಭರ್ತಿ ಯೇನಾ ಗೆಳತಿ’ ಕೃತಿಯನ್ನು ಜನಾರ್ಪಣೆ ಮಾಡುತ್ತಾ ಆಧುನಿಕ ಜಗತ್ತಿನ ವರ್ತಮಾನಕ್ಕೆ ಸ್ಪಂದಿಸುವ ನೆಲೆಯಲ್ಲಿ ಕಾವ್ಯವನ್ನು ಕಟ್ಟಿ ಯುವ ಕವಿಯತ್ರಿ ವಿದ್ಯಾ ಡಿ. ಕದಂ ಅವರು ತಮ್ಮ ಚೊಚ್ಚಲ ಕೃತಿ ಮೂಲಕ ಕೊಟ್ಟಿದ್ದಾರೆ ಅಲ್ಲದೆ ಹೆಣ್ಣೊಬ್ಬಳು ಉದ್ಯೋಗಸ್ಥೆಯಾಗಿ, ಗೃಹಣಿಯಾಗಿ, ಮಕ್ಕಳ ತಾಯಿಯಾಗಿ, ಗೆಳತಿಯಾಗಿ, ಆಧುನಿಕ ಬದುಕಿನ ಆಗುಹೋಗುಗಳಿಗೆ ಸ್ಪಂದಿಸುವ ಹೆಣ್ಣಾಗಿ ಕಾವ್ಯದ ಮೂಲಕ ತನ್ನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಿದ್ದಾರೆಂದು ಹಿರಿಯ ಲೇಖಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ನುಡಿದರು.  

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಕೃತಿ ಚಿಂತಕರಾದ ಡಾ. ಸಂಜೀವ ಕುಲಕರ್ಣಿವಹಿಸಿ ವೃತ್ತಿ ಹಾಗೂ ಪ್ರವೃತ್ತಿ ನೆಲೆಯಲ್ಲಿ ಕವಯಿತ್ರಿಯೊಬ್ಬಳ ಭಾವನಾ ಸಂಬಂಧ ತುಡಿತಗಳು ಇಲ್ಲಿ ಕಾವ್ಯದ ಮೂಲಕ ರೂಪವನ್ನು ಪಡೆದಿದೆ ಎಂದರು.  ಮುಂದಿನ ದಿನಗಳಲ್ಲಿ ಉತ್ತಮ ಕವಯಿತ್ರಿಯಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.  

ಅತಿಥಿಗಳಾಗಿ ಮಾತನಾಡಿದ ಇತಿಹಾಸತಜ್ಞ ಡಾ. ಲಕ್ಷ್ಮಣ್ ತೆಲಗಾವಿ ಅವರು ಕದಂ ಕುಟುಂಬದಲ್ಲಿ ಹೊಸ ಲೇಖಕಿಯೊಬ್ಬಳು ರೂಪುಗೊಳ್ಳುವ ಮೂಲಕ ಮನೆತನವನ್ನು ಸ್ಥಾಯಿಗೊಳಿಸುವ ಕೆಲಸವನ್ನು ಲೇಖಕರು ಮಾಡಿದ್ದು ಪ್ರಸ್ತುತ ಸ್ಥಿತಿಯನ್ನು ಅನಾವರಣಗೊಳಿಸುವ ಯತ್ನದಲ್ಲಿ ಕವಿತೆಗಳು ಸಹಜ ಸಂವೇದನೆಯ ಮೂಲಕ ಜೀವನ ಪ್ರೀತಿಯನ್ನು ಅಭಿವ್ಯಕ್ತಿಸುವ ಗುಣವಿಶೇಷಗಳಿಂದ ಕೂಡಿದೆ ಎಂದರು.   

ಇನ್ನೊರ್ವ ಅತಿಥಿಗಳಾಗಿ ಕರ್ನಾಟಕ ಇತಿಹಾಸ ಅಕಾದೆಮಿ ಪ್ರಧಾನ ಕಾರ್ಯದರ್ಶಿ ಶ್ರೀ. ಕೆ.ಎಲ್‌. ರಾಜಶೇಖರ್ ಅವರು ಮಾತನಾಡುತ್ತಾ ‘ಬರೀ​‍್ತಯೇನ ಗೆಳತಿ’ ಓದುಗರನ್ನು ಧ್ವನಿಪೂರ್ಣವಾಗಿ ಆಕರ್ಷಿಸುವ ಗುಣವನ್ನು ಇಲ್ಲಿಯ ಕವಿತೆಗಳಲ್ಲಿ ಒಡಮೂಡಿದ್ದು ಪ್ರಸ್ತುತ ಕಾಲಮಾನಕ್ಕೆ ಬೇಕಾದ ಪರಿಪ್ರೇಕ್ಷ್ಯವನ್ನು ಕಟ್ಟುವ ಮೂಲಕ ತಾನೋರ್ವ ಕವಯಿತ್ರಿಯೆಂಬುದನ್ನು ಪುರಾವೀಕರಿಸಿದ್ದಾರೆಂದು ಅಭಿಪ್ರಾಯಿಸಿದರು.  

ಲೇಖಕಿ ವಿದ್ಯಾ ಡಿ. ಕದಂ ಮಾತನಾಡುತ್ತಾ ಕಳೆದ ಮುವತ್ತು ವರುಷಗಳ ಜೀವನಾನುಭವದ ಕೆಲ ಸಂಗತಿಗಳಿಗೆ ಕಾವ್ಯದ ಸಾಲುಗಳನ್ನು ಕಟ್ಟಿಕೊಡಲು ಯತ್ನಿಸಿದ್ದೇನೆಂದು ಹೇಳುವುದರ ಮೂಲಕ ಕೃತಿಯ ಹಿಂದಿನ ಶ್ರಮಕ್ಕೆ ಸಹಕರಿಸಿದವರನ್ನು ವೇದಿಕೆ ಮೂಲಕ ಸ್ಮರಿಸಿದರು.  

ಅನುಪಮಾ ಭಂಡಾರಿ ಪ್ರಾರ್ಥನೆ  ನಡೆಸಿಕೊಟ್ಟರೆ ಅತಿಥಿ ಗಣ್ಯರನ್ನು ಡಾ. ಎನ್‌.ಎಸ್‌. ಮಹಾಂತೇಶ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ್ಲಲಿ ಸಾಧನೆ ಮಾಡಿದ ಸಾಧಕರಾದ  ಡಾ. ವಿಠಲ್ ಐ. ಬೆಣಗಿ. ರಾಜಶೇಖರ ಜಿ. ಪಾಟೀಲ.  ಶಿವಪುತ್ರ ಎಮ್ ಹೊನ್ನಳ್ಳಿ,  ಸಿದ್ಧರಾಮ ಹಿಪ್ಪರಗಿ,  ವಿಜಯೀಂದ್ರ ಅರ್ಚಕರವರಿಗೆ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.  ರವಿದಾಸ ಪ್ರಕಾಶನದ ಪರವಾಗಿ ಗಂಗಮ್ಮ ಸುರೇಶ್ ಭಂಡಾರಿ ಅವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಆರತಿ ದೇವಶಿಖಾಮಣಿ ಅವರು ನೆರವೇರಿಸಿದರು.