ಡಾ. ರಾಜೇಂದ್ರ. ತಲ್ಲೂರು ಕವಿ ಕುಲಪತಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಡಾ. ರಾಜೇಂದ್ರ. ತಲ್ಲೂರು ಕವಿ ಕುಲಪತಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ  ಆಯ್ಕೆ Poet, Chancellor Dr. Rajendra Tallur selected for the International Award

ಬೆಳಗಾವಿ, 12 ; ಚಿಕ್ಕೋಡಿ ತಾಲೂಕಿನ ನಾಗರಮುನೋಳ್ಳಿಯ ಕವಿತ್ತ  ಕರ್ಮ ಮಣಿ  ಫೌಂಡೇಶನ್‌ದಿಂದ ದಿ. 27 ರಂದು ನಡೆಯುವ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಶಿವಮೊಗ್ಗ  ಜಿಲ್ಲೆ ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದ   ಡಾ.ರಾಜೇಂದ್ರ ಟಿ.ಎಲ್‌. ತಲ್ಲೂರು ಇವರನ್ನು 2025 ನೇ ಸಾಲಿನ ಕವಿ  ಕುಲಪತಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ  ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ  ಸಂಸ್ಥಾಪಕ ಲಾಳಸಾಬ.ಹೆಚ್ ಪೆಂಡಾರಿರವರು ತಿಳಿಸಿದ್ದಾರೆ. 

ಡಾ.ರಾಜೇಂದ್ರ ಇವರು ಸಾಹಿತ್ಯ ಹಾಗೂ ಶಿಕ್ಷಣ  ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದು, ಅನೇಕ ಕವಿಗೋಷ್ಠಿ  ಉಪನ್ಯಾಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇವರಿಗೆ  ಇದುವರೆಗೂ ರಾಜ್ಯ, ರಾಷ್ಟ್ರ. ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ರಿಯಾಲಿಟಿ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ ಮತ್ತು ಏಷಿಯನ್ ವರ್ಲ್ಡ್‌ ಬುಕ್ ಆಫ್ ರೆಕಾರ್ಡ್‌ ಮತ್ತು ವರ್ಲ್ಡ್‌ ಪ್ರೆಸ್ ಬುಕ್ ಆಫ್ ರೆಕಾರ್ಡ್‌ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ದಾಖಲೆಯನ್ನು  ಸಹ  ಮಾಡಿದ್ದಾರೆ.