ಸಮೀಕ್ಷೆಯಲ್ಲಿ ಧರ್ಮ ಮತ್ತು ಜಾತಿ ಗಮನಿಸಿ ಮುಸ್ಲಿಮರು ಹೆಸರನ್ನು ನಮೂದಿಸಿ: ಲಾಯಕ ಅಲಿ
Please consider religion and caste in the survey and include the names of Muslims: Layaka Ali
ಕೊಪ್ಪಳ 22: ಕರ್ನಾಟಕ ರಾಜ್ಯ ಸರ್ಕಾರ ಸೆಪ್ಟೆಂಬರ್ 22 ಇಂದಿನಿಂದ ರಾಜ್ಯದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಾದಲ್ಲಿ ಮುಸ್ಲಿಂ ಸಮುದಾಯದ ಸಮಾಜ ಬಾಂಧವರು ಧರ್ಮದ ಕಾಲಮೀ ನಲ್ಲಿ ಇಸ್ಲಾಂ ಮತ್ತು ಜಾತಿ ಕಾಲಮಿನಲ್ಲಿ ಮುಸ್ಲಿಂ ಎಂದು ನಮೂದಿಸಿ ಎಂದು ಸಮಾಜ ದ ಹಿರಿಯ ಮುಖಂಡ ನಿವೃತ್ತ ಉಪ ತಹಶೀಲ್ದಾರರು ಹಾಗೂ ರಾಬಿತಾ, ಏ, ಮಿಲ್ಲತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಎಂ ಲಾಯಕ್ ಅಲಿ ಪ್ರಕಟಣೆಯ ಮೂಲಕ ಮುಸ್ಲಿಂ ಸಮುದಾಯದ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಮುಸ್ಲಿಮರು ಜಾಗೃತಿ ವಹಿಸಿ ಸಮೀಕ್ಷೆ ಯಲ್ಲಿ ತಮ್ಮ ಹೆಸರು ಮತ್ತು ಜಾತಿ ನಿಗದಿತ ಕಾಲಮಿನಲ್ಲಿ ಸರಿಯಾದ ರೀತಿಯಲ್ಲಿ ನಮೂದಿಸಿ, ಮತ್ತು ಸರ್ಕಾರ ನಡೆಸಿರುವ ಈ ಸಮೀಕ್ಷಾ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ವಿವರಿಸಿದರು, ಸದ್ರಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ವಿವಿಧ ವರ್ಗಗಳ ಮತ್ತು ಜಾತಿಗಳ ಹಿಂದುಳಿದ ಜನ ಗಳಿಗೆ ಸೌಲಭ್ಯಗಳನ್ನು ಒದಗಿಸುವ ಬಹುಮುಖ್ಯವಾದ ಸಮೀಕ್ಷೆ ಯಾಗಿದೆ ಇದನ್ನು ನೆನಪಿನಲ್ಲಿಟ್ಟುಕೊಂಡು ಮುಸ್ಲಿಂ ಸಮಾಜ ದ ಪ್ರತಿಯೊಬ್ಬ ವ್ಯಕ್ತಿಯು ಸಮೀಕ್ಷೆಯಲ್ಲಿ ಪಾಲ್ಗೊಂಡು ಸಮೀಕ್ಷೆಯ 60 ಕಾಲಂ ಗಳನ್ನು ಯಾವುದೇ ತಪ್ಪು, ಸಂಭವಿಸಿದಂತೆ ನಿಖರವಾಗಿ ವಿವರಗಳನ್ನು ನೋಂದಾಯಿಸಿ ,ಮುಖ್ಯವಾಗಿ ಧರ್ಮ ಮತ್ತು ಜಾತಿಯ ಕಾಲಂಗಳಲ್ಲಿ ಇಸ್ಲಾಂ ಮತ್ತು ಮುಸ್ಲಿಂ ಎಂಬುವುದು ಸರಿಯಾದ ರೀತಿಯಲ್ಲಿ ಕಡ್ಡಾಯವಾಗಿ ನಮೂದಿಸಿ ಸದರಿ ಸಮೀಕ್ಷ ಕಾರ್ಯ ಸಪ್ಟಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದ್ದು ಇದರ ಸದುಪಯೋಗ ಪಡೆದುಕೊಂಡು ಜಾಗೃತೆಯಿಂದ ತಮ್ಮ ಮಾಹಿತಿ ನೀಡಬೇಕೆಂದು ಕೊಪ್ಪಳ ನಗರದ ಮುಸ್ಲಿಂ ಸಮಾಜದ ಹಿರಿಯ ಮುಖಂಡ ನಿವೃತ ಉಪ ತಹ ಸಿಲ್ದಾರರು ಹಾಗೂ ರಾಬಿತಾ, ಏ, ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಂ ಲಾಯಕ್ ಅಲಿ ಪ್ರಕಟಣೆ ಮೂಲಕ ತಿಳಿಸಿ ಮುಸ್ಲಿಂ ಸಮಾಜ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 