ಪಂಢರಪುರಕ್ಕೆ ಭಕ್ತರ ಪಾದಯಾತ್ರೆ

ಪಂಢರಪುರಕ್ಕೆ ಭಕ್ತರ ಪಾದಯಾತ್ರೆ Pilgrimage of devotees to Pandharapur

ಯಮಕನಮರಡಿ 29: ಪ್ರತಿ ವರ್ಷದ ಪದ್ಧತಿಯಂತೆ ಆಷಾಢ ಮಾಸದ ಅಂಗವಾಗಿ ನಾಡಿನ ಉದ್ದಕ್ಕೂ ಅಪಾರ ಪಾಂಡುರಂಗನ ಭಕ್ತಾದಿಗಳು ತಮ್ಮ ಪಾದಯಾತ್ರೆ ಮೂಲಕ ಕ್ಷೇತ್ರ ಪಂಢರಪುರಕ್ಕೆ ಪಾದಯಾತ್ರೆಗೆ ಹೋಗುವ ಸಂಪ್ರದಾಯವು ಇಂದಿಗೂ ರೂಢಿಯಲ್ಲಿ ಇದೆ. ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವನೇ ಪಂಢರಪುರದ ಪಾಂಡುರಂಗ ಎಂದು ಭಕ್ತಾದಿಗಳು ಹಾಗೂ ಅನೇಕ ಪ್ರವಚನಕಾರರು ಸಹಿತ ಹೇಳುತ್ತಾ ಬಂದಿದ್ದಾರೆ.

ಪ್ರತಿ ವರ್ಷವೂ ಸುಮಾರು ಹತ್ತು ಇಪ್ಪತ್ತು ಸಾವಿರ ಭಕ್ತಾದಿಗಳು ಪಂಢರಪುರ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಆ ಭಗವಂತನ ಪಾದಕ್ಕೆ ಅರ​‍್ಿಸುತ್ತಾರೆ. ಇಂಥ ಪವಿತ್ರ ಸಂಪ್ರದಾಯವು ನಮ್ಮ ಸನಾತನ ಧರ್ಮದಲ್ಲಿ ನಡೆದುಕೊಂಡ ಬಂದಿರುವ ಒಂದು ಸಂಪ್ರದಾಯ ಇವರು ಸುಮಾರು ಒಂದು ಎರಡು ತಿಂಗಳ ಕಾಲ ಪಾದಯಾತ್ರೆ ಮೂಲಕ ಸಂಚರಿಸಿ ಬರುವ ಆಷಾಢ ಏಕಾದಶಿ ದಿನದಂದು ಸರದಿಯ ಮೂಲಕ ಪಾಂಡುರಂಗನ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂತಿರುಗುತ್ತಾರೆ. ಇಂಥ ಪಾದಯಾತ್ರೆ ದಿಂಡಿಗಳನ್ನು ಅನೇಕ ಗ್ರಾಮಸ್ಥರು ನೋಡಿ ಕಣ್ತುಂಬಿಕೊಳ್ಳುತ್ತಾರೆ.