ಫಿಜಿಯೋಥೆರಪಿ ಉಚಿತ ತಪಾಸಣಾ ಶಿಬಿರ
Physiotherapy Free Check-up Camp
ಕೊಪ್ಪಳ 26 : ಇತ್ತೀಚಿಗೆ ನಗರದ ಸಮೂಹ ಸಾಮಾರ್ಥ್ಯ ಕಛೇರಿಯಲ್ಲಿ ಸಾಮಾರ್ಥ್ಯ ವತಿಯಿಂದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಒಂದು ದಿನದ ವಿಶೇಷ ಉಚಿತ ಫಿಜಿಯೋಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಮತಿ ಮಧು ಪಾವಲಿ ಶೆಟ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ತೀವ್ರತರ ವಿಕಲಚೇತನ ಮಕ್ಕಳಿಗೆ ಫಿಜಿಯೋಥೆರಪಿ ಆಪ್ತ ಸಮಾಲೋಚನೆ ಮತ್ತು ಸಾಧನ ಸಲಕರಣೆಗಳು ಬಹಳ ಮುಖ್ಯ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 50 ತೀವ್ರತರ ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಿಸಲಾಯಿತು. ನಂತರ ಅನುಭವಿ ಫಿಜಿಯೋಥೆರಪಿಸ್ಟ್ರಾದ ಡಾಽಽ ಚೈತ್ರಾ ರವರು ಬೆನ್ನು ನೋವು, ಸೊಂಟ ನೋವು, ಮೊಣಕಾಲು ನೋವು, ಬೆನ್ನುಹುರಿ ಪಾರ್ಶ್ವವಾಯುಕ್ಕೆ ಒಳಗಾದವರನ್ನು ತಪಾಸಣೆ ಮಾಡಿ ಉಚಿತ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಡಿಎನ್ಎ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಸವಿತಾ ಬಸವರಾಜ್, ಇನ್ನರ್ ವಿಲ್ ಕ್ಲಬ್ ನ ಸದಸ್ಯರುಗಳಾದ ಶ್ರೀಮತಿ ಅನುಷಾ ಹಿರೇಮಠ್, ಶ್ರೀಮತಿ ತ್ರಿವೇಣಿ ವಡ್ರಟ್ಟಿ, ಶ್ರೀಮತಿ ಲಲಿತಾ ಅರಿಕೇರಿ, ಶ್ರೀಮತಿ ಸುಧಾ ಶೆಟ್ಟರ್, ಶ್ರೀಮತಿ ಹೇಮಾ ಬಳ್ಳಾರಿ, ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕೋಮಲ ಕುದುರೆಮೋತಿ, ವಿಶೇಷ ಶಿಕ್ಷಕರಾದ ನೇತ್ರಾ, ರೇಣುಕಮ್ಮ ಕುಂಬಾರ, ಸಾಮರ್ಥ್ಯ ಸಂಸ್ಥೆಯ ವ್ಯವಸ್ಥಾಪಕರಾದ ಎಚ್ಎನ್ ಬಸಪ್ಪ, ಹಾಗೂ ರಮೇಶ ಈಳಿಗೇರ ಸೇರಿದಂತೆ 40ಕ್ಕೂ ಹೆಚ್ಚು ವಿಕಲಚೇತನರ ಮಕ್ಕಳ ಪಾಲಕರು ಪಾಳಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 