ಇಂದು ಶಿವಮೊಗ್ಗ ರಂಗಾಯಣದಿಂದ ‘ಸ್ವಾತಂತ್ರ್ಯ ಓಟ’ ನಾಟಕ ಪ್ರದರ್ಶನ
Performance of the play ‘Swatantrya Ota’ by Shivamogga Rangayana today
ಲೋಕದರ್ಶನ ವರದಿ
ಬೆಳಗಾವಿ, ಜು. 6: ಶಿವಮೊಗ್ಗ ರಂಗಾಯಣ ತಂಡದ ವತಿಯಿಂದ ಜುಲೈ 7, 2026ರಂದು (ಮಂಗಳವಾರ) ಸಂಜೆ 6 ಗಂಟೆಗೆ ನಗರದ ಕನ್ನಡ ಭವನದಲ್ಲಿ ‘ಸ್ವಾತಂತ್ರ್ಯ ಓಟ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಮಹಮ್ಮದ್ ಕುಂಟಿರವರ ರಚನೆಯಾದ ಈ ನಾಟಕವನ್ನು ವೇಣಾಸಂ ಹಾಗೂ ಕನ್ನಡ ಭವನದ ಆಶ್ರಯದಲ್ಲಿ ಪ್ರದರ್ಶಿಸಲಾಗುತ್ತಿದೆ. ‘ಸ್ವಾತಂತ್ರ್ಯ ಓಟ’ ನಾಟಕವು ಮನಸ್ಸನ್ನು ತಟ್ಟುವ ಕಥಾಹಂದರ ಹೊಂದಿದ್ದು, ಸಮಾಜದ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಹೃದಯಸ್ಪರ್ಶಿಯಾಗಿ ಸಾರುತ್ತದೆ. ಪ್ರದರ್ಶನವು ಸಂಜೆ 6 ಗಂಟೆಗೆ ನಿಗದಿತ ಸಮಯಕ್ಕೆ ಆರಂಭವಾಗಲಿದ್ದು, ಪ್ರೇಕ್ಷಕರು ಕನಿಷ್ಠ 10 ನಿಮಿಷಗಳ ಮುಂಚಿತವಾಗಿ ಆಗಮಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 