ಗ್ರಾಮೀಣ ಭಾಗದ ಜನರಿಗೆ ಯೋಗ್ಯವಾದ ಆರೋಗ್ಯ ಸೇವೆ ಸಿಗುತ್ತಿಲ್ಲ: ಸಂಪಗಾವಿ

People in rural areas are not getting proper healthcare: Sampagavi

ಮಾಂಜರಿ 18: ಇಂದು ವೈದ್ಯಕೀಯ ರಂಗದಲ್ಲಿ ಹಲವಾರು ಸಂಶೋಧನೆಗಳ ಆಗಿದ್ದರೂ ಕೂಡ ಗ್ರಾಮೀಣ ಭಾಗದ ಜನರಿಗೆ ಯೋಗ್ಯವಾದ ಆರೋಗ್ಯ ಸೇವೆ ಸಿಗುತ್ತಿಲ್ಲ ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚಿನ ಮಾದಕ ದ್ರವ್ಯ ಹಾಗೂ ಇನ್ನಿತರ ವ್ಯಸನದಿಂದ ಯುವಕರು ಶರೀರ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದಾರೆ ಅದಕ್ಕಾಗಿ ಯುವಕರಲ್ಲಿ ಹೆಚ್ಚಿನ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ವೈದ್ಯರು ಸರ್ವಸಾಮಾನ್ಯ ಜನರಿಗೆ ಯೋಗ್ಯವಾದ ಮಾರ್ಗದರ್ಶನ ನೀಡಿ ಸದೃಢ ಹಾಗೂ ಸಮೃದ್ಧ ಸಮಾಜ ನಿರ್ಮಾಣಕ್ಕಾಗಿ ವೈದ್ಯರು ಕೈಜೋಡಿಸಿ ಬೇಕೆಂದು ಚಿಕ್ಕೋಡಿಯ ಉಪ ವಿಭಾಗಿಯ  ಅಧಿಕಾರಿಗಳಾದ ಎಸ್ ಎಸ್ ಸಂಪಗಾವಿ ಹೇಳಿದರು 

ಅವರು ಬುಧವಾರರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಡಾ ಎನ್ ಎ ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯುರ್ವೇದ ವಿಭಾಗದ ಕಾಯಕ ರಚನಾ ಹಾಗೂ ಪಂಚಕರ್ಮ ವಿಭಾಗದ ವತಿಯಿಂದ ಆಯೋಜಿಸಲಾದ ಯಕೃತ್ ಸಂಜೀವಿನಿ 2025ರ ಆಯುರ್ವೇದಿಕ್ ವೈದ್ಯಕೀಯ ವಿದ್ಯಾರ್ಥಿಗಳ ರಾಷ್ಟ್ರೀಯ ಪರಿಷತ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಎನ್ ಎ ಮಗದುಮ ವಹಿಸಿದ್ದರು ಅತಿಥಿಯಾಗಿ ಎಲ್‌ಎನ್ ಮಗದುಮ್, ಸುರೇಶ್ ಚೌಗುಲ, ಡಾ ಹರ್ಷವರ್ಧನ್ ಮಗದುಮ್, ಪ್ರಾಚಾರ್ಯ ಡಾ ಪ್ರಸನ್ನ ಸವನೂರು, ಉಪ ಪ್ರಾಚಾರ್ಯ ಡಾ ರಾಮಗೌಡ ಪಾಟೀಲ್, ವಿಭಾಗದ ಮುಖ್ಯಸ್ಥರಾದ ಡಾ ಪಂಕಜಾ ಸಾವನೂರ್, ಡಾ ವೈಶಾಲಿ ಚೌಗುಲಾ ಹಾಜರಿದ್ದರು. 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ ಎನ್ ಎ ಮಾಗದುಮ ಮಾತನಾಡುವಾಗ ಮಾನವನ ಜೀವನಕ್ಕೆ ಮತ್ತು ಬದುಕಲಿಕ್ಕೆ  ಆರೋಗ್ಯವಾದ ಮಹತ್ವ ಇದ್ದು ಸದೃಢ ಆರೋಗ್ಯ ಕಾಯ್ದುಕೊಳ್ಳಲು ಎಲ್ಲರೂ ವ್ಯಸನ ಮುಕ್ತ ರಾಗರಬೇಕು ಮಾನವನ ಶರೀರದ ಮುಖ್ಯ ಅಂಗವಾದ ಯಕೃತ್ ವನ್ನು ಕಾಯ್ದುಕೊಳ್ಳಲು ಬಹಳ ಮುಖ್ಯವಾಗಿದ್ದು ಅದಕ್ಕಾಗಿ ಎಲ್ಲರೂ ಸಸ್ಯಹಾರಿ ಆಹಾರ ಸೇವನೆ ಮಾಡುವ ಅವಶ್ಯಕತೆ ಎಂದು ಅವರು ಹೇಳಿದರು. 

 ಈ ಕಾರ್ಯಕ್ರಮದಲ್ಲಿ ಡಾ ಸುಜಯ್ ಕುಲಕರ್ಣಿ ಡಾ ಸಮೀರ್ ನಾಯಕ್, ಡಾ ಅನಿರುದ್ಧ ಕುಲಕರ್ಣಿ, ಡಾ ಅಶೋಕ್ ಕುಲಕರ್ಣಿ, ಡಾ ವಿನಯ್ ಮೋಹನ್, ಡಾ ಬಿ ವೈ ಕಂಠಿ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಡಾ ವಿಶಾಲ್ ಚೌಗುಲೆ ಸ್ವಾಗತಿಸಿ ಡಾ ವಿವೇಕ್ ಸೋಲಾಪುರ್ ಕರ್ ಮತ್ತು ಡಾ ಸೀಮಾ ನಿರೂಪಿಸಿ ವಂದಿಸಿದರು.