ಕಂಪ್ಲಿ 13: ಜಂಗಮ ವಟುಗಳು ಸಂಸ್ಕೃತ,ವೇದ, ಜ್ಯೋತಿಷ್ಯ ಶಾಸ್ತ್ರಗಳನ್ನು ಕಲಿಯುವಲ್ಲಿ ಆಸಕ್ತಿ ತೋರಿಸಬೇಕಾಗಿದೆ ಎಂದು ಶ್ರೀ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಜ ಶಾಸ್ತ್ರಿ ಹೇಳಿದರು.
ಅವರು ಕಂಪ್ಲಿ ಪಟ್ಟಣದ ಬೊಚ್ಚಯ್ಯಸ್ವಾಮಿ ಸ್ಥಾಪಿತ ಸಾಂಗತ್ರಯ ಸಂಸ್ಕೃತ,ವೈದಿಕ,ಜ್ಯೋತಿಷ್ಯ ಪಾಠಶಾಲೆಯಲ್ಲಿ ಪ್ರಸಕ್ತ ಸಾಲಿನ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠಶಾಲೆಯ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿ, ಪಾಠಶಾಲೆಯ ಪ್ರಾಚಾರ್ಯ ಘನಮಠದಯ್ಯ ಶಾಸ್ತ್ರಿ ಹಿರೇಮಠ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಜಂಗಮ ವಟುಗಳ ಅನುಕೂಲಕ್ಕಾಗಿ ಸುಮಾರು 200 ವರ್ಷಗಳ ಹಿಂದೆ ಪಟ್ಟಣದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಲಾಗಿದ್ದು, ಅಂದಿನಿಂದ ಇಂದಿನವರೆಗೂ ಸಾವಿರಾರು ಜಂಗಮವಟುಗಳು ಇಲ್ಲಿ ಸಂಸ್ಕತಾಧ್ಯಯನ ಮಾಡಿ ರಾಜ್ಯವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಠ ಮಾನ್ಯಗಳಿಗೆ ಸ್ವಾಮೀಜಿಗಳಾಗಿರುವುದರ ಜೊತೆಗೆ ಜ್ಯೋತಿಷ್ಯ ಪಂಡಿತರಾಗಿ ತಮ್ಮ ಜೀವನ ನಡೆಸುತ್ತಿದ್ದಾರೆಂದ ಅವರು ಇದೀಗ ಪ್ರಸಕ್ತ ಸಾಲಿನ ಸಂಸ್ಕೃತ ಪಾಠ ಪ್ರವಚನಗಳು ಇಂದಿನಿಂದ ಆರಂಭವಾಗಿದ್ದು,ಪಾಠಶಾಲೆಯಲ್ಲಿ 40 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಕಳೆದ ವರ್ಷದ 20 ವಿದ್ಯಾರ್ಥಿಗಳ ಜೊತೆಗೆ ಪ್ರಸಕ್ತ ಸಾಲಿನಲ್ಲಿ 20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದ್ದು,3 ವರ್ಷಗಳ ಅವಧಿಯಿದ್ದು,3 ವರ್ಷಗಳ ನಂತರ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದರು.
ನಂತರ ಅಲಂಕೃತ ವೇದಿಕೆಯಲ್ಲಿ ಸರಸ್ವತಿ ಭಾವಚಿತ್ರವನ್ನು ಇಟ್ಟು ವಿವಿಧ ಹೂಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ನಡೆಸಿ ಪುಷ್ಾರೆ್ಪಣ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಾಂಗಾತ್ರಯ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠಶಾಲೆಯ ಪದಾಧಿಕಾರಿಗಳಾದ ಡಾ.ಜಗನ್ನಾಥ ಹಿರೇಮಠ, ಅಲಬನೂರು ಬಸವರಾಜ, ಯುಗಾದಿ ಬಸವರಾಜ, ಅಶೋಕ ಕುಕನೂರ, ಎಚ್.ಅಮರೇಶ್, ಗೌಳೇರು ಶೇಖರ್ಪ, ಮರಿಶೆಟ್ರು ವಿಜಯಕುಮಾರ್, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು.