ಪವಿತ್ರಾ ಹಿರೇಮಠರಿಗೆ ‘ಸಮಾಜ ರತ್ನ’ ರಾಜ್ಯೋತ್ಸವ ಪ್ರಶಸ್ತಿ

 ಪವಿತ್ರಾ ಹಿರೇಮಠರಿಗೆ ‘ಸಮಾಜ ರತ್ನ’ ರಾಜ್ಯೋತ್ಸವ ಪ್ರಶಸ್ತಿ  Pavithra Hiremath receives 'Samaja Ratna' Rajyotsava award

ಲೋಕದರ್ಶನ ವರದಿ 

ಪವಿತ್ರಾ ಹಿರೇಮಠರಿಗೆ ‘ಸಮಾಜ ರತ್ನ’ ರಾಜ್ಯೋತ್ಸವ ಪ್ರಶಸ್ತಿ  

ಬೆಳಗಾವಿ 18:  ಬೆಳಗಾವಿಯ ಪವಿತ್ರಾ ಹಿರೇಮಠ ಇವರ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿಯವರು  ‘ಸಮಾಜ ರತ್ನ’ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದಾರೆ.  

ಸಂಘಟನೆಯವರು ನವೆಂಬರ 30 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ 2 ಗಂಟೆಗೆ ಈ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.  

ಫೋಟೋ: ಪವಿತ್ರಾ ಹಿರೇಮಠ