ಪಟೇಲ್ ರಿಂದ ಭುವನೇಶ್ವರಿ ವೃತ್ತದ ಉದ್ಘಾಟನೆ

ಪಟೇಲ್ ರಿಂದ ಭುವನೇಶ್ವರಿ ವೃತ್ತದ ಉದ್ಘಾಟನೆ Patel inaugurates Bhuvaneshwari Circle

ಪಟೇಲ್ ರಿಂದ ಭುವನೇಶ್ವರಿ ವೃತ್ತದ ಉದ್ಘಾಟನೆ 

ಕೊಪ್ಪಳ 02: ನಗರದ ಮೂರನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಹಮಾಲರ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಭುವನೇಶ್ವರಿ ವೃತ್ತದ ಉದ್ಘಾಟನೆ ಯನ್ನು ಶನಿವಾರದಂದು ಕರ್ನಾಟಕ ರಾಜ್ಯೋತ್ಸವದ ದಿನಾಚರಣೆ ದಿನದಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ರವರು ಉದ್ಘಾಟನೆ ನೆರವೇರಿಸಿ ಲೋಕಾರೆ​‍್ಣ ಮಾಡಿದರು,ನಂತರ ಸರಳ ಸಾಂಕೇತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಯಿ ಭುವನೇಶ್ವರಿ ನಮ್ಮೆಲ್ಲರನ್ನು ಕಾಪಾಡಲಿ, ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಆಶೀರ್ವದಿಸಲಿ, ಕನ್ನಡ ನಾಡಿನ ಪ್ರತಿಯೊಬ್ಬ ಪ್ರಜೆ ಕನ್ನಡ ಮಾತನಾಡಲಿ ,ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವಂತಾಗಲಿ, ಎಲ್ಲರೂ ಸೇರಿ ಕನ್ನಡಾಂಬೆ ತಾಯಿಯ ಹೆಮ್ಮೆಯ ಪುತ್ರರಂತೆ ಕನ್ನಡ ಭಾಷೆ ,ನಮ್ಮ ನಾಡಿನ ನೆಲ, ಜಲ ,ಇಲ್ಲಿಯ ಪರಂಪರೆ, ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವದರ ಜೊತೆಗೆ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸಮಗ್ರ ಮಾಹಿತಿ ಮತ್ತು ಪರಿಚಯಿಸುವಂಥ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಬೇಕು ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು, ಈ ಸಂದರ್ಭದಲ್ಲಿ ಹಮಾಲರ ಕಾಲೋನಿಯ ಹಿರಿಯ ಸಾರ್ವಜನಿಕರು, ಸಮಾಜ ಬಾಂಧವರು, ಯುವ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖ್ಯಸ್ಥರು, ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,