ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ Passed the CA exam

ಲೋಕದರ್ಶನ ವರದಿ 

 ವಿಜಯಪುರ 10: ನಗರದ ಪ್ರತಿಷ್ಠಿತ ದ್ವಾರಕಾದಾಸ ವಿಠ್ಠಲದಾಸ ದರಬಾರ ಮೆಮೊರಿಯಲ್ ಟ್ರಸ್ಟ್‌ನ ಕುಮುದಬೆನ್ ದರಬಾರ ಮಹಾವಿದ್ಯಾಲಯದ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಶ್ರೀನಿಧಿ ಮಹಿಪತಿ ದೇಸಾಯಿ ಮತ್ತು ಅದಿತಿ ಮೊಕಾಶಿ ಇವರು 2026ರ ಮೇ ತಿಂಗಳಲ್ಲಿ ನಡೆದ ಚಾರ್ಟರ್ಡ್‌ ಅಕೌಂಟೆನ್ಸಿ (ಸಿಎ) ಕೋರ್ಸ್‌ನ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಿಗೆ ಸಂಸ್ಥೆಯ ಅಧ್ಯಕ್ಷ ರಾಧಾ ರಾಜೇಶ ದರಬಾರ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಡಾ. ವ್ಹಿ. ಬಿ. ಗ್ರಾಮಪುರೋಹಿತ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.