ಪಾಲಕ-ಶಿಕ್ಷಕ-ವಿದ್ಯಾರ್ಥಿ ಸಮಾವೇಶ
Parent-Teacher-Student Conference
ಬೆಳಗಾವಿ 25: ನಗರದ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಆರ್. ಪಿ. ಡಿ. ಮಹಾವಿದ್ಯಾಲಯದಲ್ಲಿ ದಿ. 23ರಂದು ಪಾಲಕ-ಶಿಕ್ಷಕ-ವಿದ್ಯಾರ್ಥಿ ಸಮಾವೇಶ ಜರುಗಿತು.
ಸಮಾರಂಭದಲ್ಲಿ ಅಥಿತಿ ಗಳಾಗಿ ಪಾಲ್ಗೊಂಡಿದ್ದ ಸಂಸ್ಥೆಯ ವೈಸ್ ಚೇರ್ಮನ್ ರಾದ ಡಾ. ಎಸ್. ವೈ. ಪ್ರಭು ಅವರು ವಿದ್ಯಾರ್ಥಿಗಳ ಸತತವಾದ ಅಭ್ಯಾಸದಿಂದಾಗುವ ಲಾಭ, ಪಾಲಕರು ಮಕ್ಕಳ ಬಗ್ಗೆ ವಹಿಸಬೇಕಾದ ಕಾಳಜಿ ಕುರಿತು ಮಾತನಾಡಿದರು.. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಬಿ. ಕೋಲ್ಕಾರ ಮತ್ತು ಮರಾಠಿ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಡಿ. ಗಾವಡೆ ಅವರು ಪಾಲಕ-ಶಿಕ್ಷಕ-ವಿದ್ಯಾರ್ಥಿ ಗಳ ನಡುವಿನ ಸಂಭಂದ, ವಿದ್ಯಾರ್ಥಿಗಳು ಪಠ್ಯ- ಪೂರಕ ಪಠ್ಯ ಹಾಗೂ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಸಮಯಪ್ರಜ್ಞೆಯೊಂದಿಗೆ ಮತ್ತು ಅಧ್ಯಯನದ ಶಿಸ್ತಿನ ಮೂಲಕ ಸಾಧನೆ ಮಾಡುವ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪ್ರಾಚಾರ್ಯರಾದ ಡಾ. ಅಭಯ ಪಾಟೀಲ ಅವರು ವಹಿಸಿದ್ದರು..
ಆರಂಭದಲ್ಲಿ ಐ.ಕ್ಯೂ.ಎ.ಸಿ. ಚೇರಮನ್ನರಾದ ಡಾ. ಪ್ರಸನ್ನ ಜೋಶಿ ಅವರು ಸ್ವಾಗತ ಕೋರಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಆಯಾ ವಿಷಯಗಳಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಡಾ. ಎಸ್. ಎಚ್. ಪಾಟೀಲ, ವಾಣಿಜ್ಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ವೈಶಾಲಿ ಹಣಮಗೊಂಡ ಸೇರಿದಂತೆ ಎಲ್ಲಾ ಅಧ್ಯಪಕರು ಮತ್ತು ಬಹು ಸಂಖ್ಯೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಪ್ರೊ. ಸಾಯಿಶೀಲಾ ಜಡೆ ಅವರು ನಿರೂಪಿಸಿ ವಂದನಾರೆ್ಣ ಸಲ್ಲಿಸಿದರು..
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 