ರಸ್ತೆ ಸುರಕ್ಷತೆ ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ಪಥಸಂಚಲನ

ರಸ್ತೆ ಸುರಕ್ಷತೆ ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ಪಥಸಂಚಲನ Parade on road safety and mandatory helmets

ರಸ್ತೆ ಸುರಕ್ಷತೆ ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ಪಥಸಂಚಲನ 


ರಾಣಿಬೆನ್ನೂರ:3 ತಾಲೂಕಿನ ಚಳಗೇರಿ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ಹಾಗೂ ಹೆದ್ದಾರಿ ಪೊಲೀಸ್ ಗಸ್ತು ತಂಡದ ವತಿಯಿಂದ ರಸ್ತೆ ಸುರಕ್ಷತೆ ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ಪಥಸಂಚಲನ ನಡೆಸಿದರು. 

  ನಗರದ ಹಳೇ ಪಿ.ಬಿ.ರಸ್ತೆಯ ಎನ್‌.ವಿ.ಹೋಟೆಲ್‌ನಿಂದ ಆರಂಭವಾದ ಪಥಸಂಚಲನ ರಾಜೇಶ್ವರಿ ನಗರ, ಉಮಾಶಂಕರ ನಗರ, ಕೆ.ಇ.ಬಿಗಣೇಶ ದೇವಸ್ಥಾನ, ಬಸ್ ನಿಲ್ದಾಣ, ಮೆಡ್ಲೇರಿ ಕ್ರಾಸ್, ಅಂಚೆ ವೃತ್ತ, ಎಮ್‌.ಜಿ.ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್ ಸೇರಿದಂತೆ  ವಿವಿಧ ಕಡೆ ನಡೆಯಿತು. 

ಇದೇ ಸಮಯದಲ್ಲಿ ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಹೂವು ನೀಡಿ ಪೋತ್ಸಾಹಿಸಲಾಯಿತು.   ಚಳಗೇರಿ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ವ್ಯವಸ್ಥಾಪಕ ಕೇಶವ ರೆಡ್ಡಿ, ಸಿಬ್ಬಂದಿ ವಿರೇಶ, ಹನುಮಂತ, ಪಿಎಸ್‌ಐ ಮತ್ತು ಪೊಲೀಸ್ ಹಾಗೂ ಟೋಲ್ ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.