26 ರಿಂದ ಮೂರು ದಿನಗಳ ಕಾಲ ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವ
Pandurang Rukmai Devara Dindi Utsav for three days from 26th
ರಾಣಿಬೆನ್ನೂರ 26: ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವವು ಎ 26 ರಿಂದ 28 ವರೆಗೆ ಮೂರು ದಿನಗಳ ಕಾಲ ದೇವರಗುಡ್ಡ ರಸ್ತೆಯ ಪಾಂಡುರಂಗ ರುಕ್ಮಾಯಿ ದೇವಸ್ಥಾನದಲ್ಲಿ ಜರುಗಲಿದೆ ಎಂದು ನಾಮದೇವ ಸಮಾಜದ ಅಧ್ಯಕ್ಷ ಪ್ರವೀಣ ಎಸ್ ಕೋಪರ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎ26 ರಂದು ಸಂಜೆ 6-00 ಗಂಟೆಗೆ ಪೋತಿ ಸ್ಥಾಪನೆಯು ಕೃಷ್ಣಪ್ಪ ಕೋಪರ್ಡೆ ಹಾಗೂ ಸಂತ ಮಹೋದಯರಿಂದ ಜರುಗುವುದು. ಸಂಜೆ 7-30 ರಿಂದ 9-00 ರವರೆಗೆ ಭಜನೆ, ಕೀರ್ತನೆ ನಡೆಯುವುದು.
ಎ27 ಸೋಮವಾರ ದಂದು ಬೆಳ್ಳಿಗ್ಗೆ 5-00 ಗಂಟೆಗೆ ಕಾಕಡಾರತಿ ಭಜನೆ, ಮತ್ತು 6-30 ರಿಂದ 9-00 ರವರೆಗೆ ಮಹಾ ಗಣಪತಿ, ಪಾಡುರಂಗ ರುಕ್ಮಾಯಿ ಹಾಗೂ ತುಳಜಾ ಭವಾನಿ ದೇವರಿಗೆ ಅಭಿಷೇಕ ಮತ್ತು ಪೂಜಾ ವಿಧಾನಗಳು ನಡೆಯುವವು. ನಂತರ ಸಂತರಿಂದ ಭಜನೆ ಕಾರ್ಯಕ್ರಮ ನಡೆಯುವುದು. ಅಂದು ಸಂಜೆ 6-00 ಗಂಟೆಯಿಂದ 8-00 ಗಂಟೆಯವರೆಗೆ ಕೀರ್ತನೆ ಕಾರ್ಯಕ್ರಮವನ್ನು ಪಂಡರಾಪುರದ ಯಶವಂತ ಪ್ರಭಾಕರ ಬುವಾ ಬೋದಲೆ ಮಹಾರಾಜರು ನಡೆಸಿಕೊಡುವರು ಈ ವೇಳೆ ಹೆಸರಾಂತ ಮೃದಂಗಕಾರರು, ಗಾಯಕರು, ಹಾಗೂ ಸಂತ ಮಹಾಂತರು ಆಗಮಿಸುವರು.
ಎ.28 ಮಂಗಳವಾರ ದಂದು ಬೆಳ್ಳಿಗ್ಗೆ 8-30ಕ್ಕೆ ಪಾಂಡುರಂಗ ರುಕ್ಮಾಯಿ ಪಾಲಕಿ ಉತ್ಸವವು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪುವುದು. ನಂತರ ಸಂತ ಪೂಜಾ, ಮಹಾ ಮಂಗಳಾರತಿ, ಸಂತರ ಕೀರ್ತನೆ ನಡೆಯಲಿದೆ. ಮಧ್ಯಾಹ್ನ 1-30 ಕ್ಕೆ ಅನ್ನ ಸಂತರೆ್ಣ ಕಾರ್ಯಕ್ರಮವಿದ್ದು, ಸರ್ವ ಸಮಾಜದ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋಪರ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 