ಒಂದು ದಿನದ ಅಂತರಾಷ್ಟ್ರೀಯ ಸಮ್ಮೇಳನ ಸಂಶೋಧನೆ ಕುರಿತು ಕಾರ್ಯಗಾರ

One-day international conference workshop on research

 ಒಂದು ದಿನದ ಅಂತರಾಷ್ಟ್ರೀಯ ಸಮ್ಮೇಳನ ಸಂಶೋಧನೆ ಕುರಿತು ಕಾರ್ಯಗಾರ  

ರಾಣೇಬೆನ್ನೂರು 21;  ನಗರ ಹೊರ ವಲಯದ, ರಾಣೆಬೆನ್ನೂರು ತಾಲೂಕ ಶಿಕ್ಷಣ ಸಂಸ್ಥೆಯ, ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ, ಇತ್ತೀಚೆಗೆ, ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಅಂತರಾಷ್ಟ್ರೀಯ ಸಮ್ಮೇಳನ ಸಂಶೋಧನೆ ಕುರಿತು ಕಾರ್ಯಗಾರ ನಡೆಯಿತು.  ಕಾರ್ಯಗಾರವು, ಹಾವೇರಿ ವಿಶ್ವವಿದ್ಯಾಲಯ ಸಹಯೋಗ ನೀಡಿತ್ತು.   

   ಸಂಸ್ಥೆಯ ಅಧ್ಯಕ್ಷ ಡಾಕ್ಟರ್ ಸಂಜಯ್ ಎಸ್ ಸಾಹುಕಾರ, ಗೌರವ ಅಧ್ಯಕ್ಷ, ಶುಭಾಶ ಸಾವುಕಾರ್ ಮತ್ತು ಕಾರ್ಯದರ್ಶಿ ಶ್ರೀಮತಿ ಸೀತಾ ಕೋಟಿ ಅವರು ಜಂಟಿಯಾಗಿ ಕಾರ್ಯಾಗಾರ ಉದ್ಘಾಟಿಸಿ ಚಾಲನೆ ನೀಡಿದರು.  ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜರ್ಮನಿಯ  ಮ್ಯಾಕ್ಸ್‌ ಪ್ಲಠ್ ವಿಶ್ವವಿದ್ಯಾಲಯದ ಡಾ: ಕಾವ್ಯ ಮೋಹನ್ ಅವರು ಉಪನ್ಯಾಸ ನೀಡಿದರು.  ಕಾಲೇಜು ಪ್ರಾಚಾರ್ಯ, ಪ್ರೊ: ಸಿ.ಎ.ಹರಿಹರ, ಅವರು ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು.  ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ಎಸ್‌. ಜಂಗಮಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ವೇದಿಕೆಯಲ್ಲಿ ಐಕ್ಯೂಸಿ ಡಾ: ಮಧುಕುಮಾರ್ ಆರ್, ಭೌತಶಾಸ್ತ್ರದ ಮುಖ್ಯಸ್ಥ ಹೆಚ್‌. ಜಿ. ಬಸವರಾಜ್, ಸೇರಿದಂತೆ ಮತ್ತಿತರಗಣ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು. ದಾವಣಗೆರೆ, ಹಾವೇರಿ, ರಾಣೆಬೆನ್ನೂರು ಮತ್ತಿತರ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ರಶ್ಮಿ ಸಂಗಡಿಗರು ಪ್ರಾರ್ಥಿಸಿದರು. ಸ್ಪಂದನಾ ರೆಡ್ಡಿ ನಾಡಗೀತೆ ಹಾಡಿದರು. ಭಾವನಾ ನಿರೂಪಿಸಿ, ವಂದಿಸಿದರು.