ಎಲ್ ಐ ಸಿ ನೌಕರರಿಂದ ಒಂದು ದಿನದ ಸಾರ್ವತ್ರೀಕ ಮುಷ್ಕರ
One-day general strike by LIC employees
ಲೋಕದರ್ಶನ ವರದಿ
ಕೊಪ್ಪಳ 13: ನಗರದ ಎಲ್ ಐ ಸಿ ಕಛೇರಿ ಮುಂದೆ ಒಂದು ದಿನದ ನೌಕರರು ಸಾರ್ವತ್ರೀಕ ಮುಷ್ಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಮುಷ್ಕರ ಮಾಡಿದರು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕೊಪ್ಪಳ ಶಾಖಾ ಘಟಕದ ಅಧ್ಯಕ್ಷರಾದ ಶೇಖರ್ಪ ಎಲ್ಐಸಿ ಯಲ್ಲಿ 3 ಮತ್ತು 4 ವರ್ಗಗಳ ನೇಮಕಾತಿ ಮತ್ತು 1995 ರ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕೊಪ್ಪಳ ಶಾಖಾ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ವಿಮೆ ಉದ್ಯಮೇಯಲ್ಲಿ ವಿದೇಶಿ ನೇರ ಬಂಡವಾಳ 100ಅ ಮಾಡಿರುವ ಕೇಂದ್ರ ಸರಕಾರ ಮತ್ತು ನೌಕರರಿಗೆ ಜಾರಿ ಮಾಡುತ್ತಿರುವ 4 ಲೇಬರ್ ಕೋಡುಗಳನ್ನು ಕೂಡಲೆ ರದ್ದು ಮಾಡಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರಿಕಾಂತ ಗೊಂಡಬಾಳ, ರಮೇಶ, ಶ್ರೀಪಾದ, ಸಿದ್ದಪ್ಪ, ವಿನಯಕುಮಾರ, ವಿಜಯಕುಮಾರ, ಚಂದ್ರಶೇಖರ, ಲಕ್ಷ್ಮಯ್ಯ, ಶ್ರಿಕಾಂತ, ಚಂದನ ಹಾಗೂ ಮಹಿಳಾ ಸಂಗಾತಿಗಳಾದ ಸುಕನ್ಯಾ , ಭಾರತಿ, ಪುಷ್ಪಾವತಿ, ಮಹಾಲಕ್ಷಿ, ಶಿರಿಷಾ ಉಪಸ್ಥಿತರಿದ್ದು ಮುಷ್ಕರವನ್ನು ಯಶಸ್ವಿಗೊಳಿಸಿದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 