ದಿ. 27ರಂದು ರಾಜ್ಯ ಮಟ್ಟದ ನಾತೀಯ ಮುಷಾಯಿರಾ ಧಾರ್ಮಿಕ ಕವಿ ಗೋಷ್ಠಿ ಕಾರ್ಯಕ್ರಮ
On 27th state level Natiya Mushaira religious poet concert program
ಕೊಪ್ಪಳ 26: ಪಕ್ಕದ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಅಂಜುಮನ್ ಶಾದಿ ಮಹಲ್ ಸಭಾಭವನದಲ್ಲಿ ದಿ. 27ರ ಶನಿವಾರ ಏಳು ಗಂಟೆಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ 6ನೇ ಬಾರಿಗೆ (ನಾತಿಯ ಮುಷಾಯಿರ ) ರಾಜ್ಯಮಟ್ಟದ ಧಾರ್ಮಿಕ ಕವಿಗೋಷ್ಠಿ ಕಾರ್ಯಕ್ರಮ ಜರುಗಲಿದೆ.
ಅಖಿಲ ಕರ್ನಾಟಕ ರಾಜ್ಯಮಟ್ಟದ ನಾತಿಯ ಮುಷಾಯಿರ ಧಾರ್ಮಿಕ ಕವಿಗೋಷ್ಠಿ, ಸಮಾರಂಭದ ಅಧ್ಯಕ್ಷತೆಯನ್ನು ಕನೇಕಲ್ ದರ್ಗಾದ ಪೀಠಾಧಿಪತಿ ಹಜರತ್ ಅಲಹಾಜ್ ಸೈಯದ್ ಶಾಹ್ ಅಬ್ದುಲ್ ವಹಾಬ್ ಸಾಹೇಬ್ ಖಾದ್ರಿ ವಹಿಸಲಿದ್ದಾರೆ ಹಾಗೂ ಸಮಾರಂಭದ ಕೊನೆಯಲ್ಲಿ ಆಶೀರ್ವಚನ ನೀಡಲಿದ್ದಾರೆ, ಹಾಗೂ ಕನೇಕಲ್ ದರ್ಗಾ ದ ಗುರುಗಳಾದ ಹಜರತ್ ಸೈಯದ್ ಶಾ ಮೂರ್ಶೆದ ಪೀರ್ ಖಾದ್ರಿ ಸೂಫಿ ಸಾಹೇಬ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ಜೋಗಲಿದೆ, ಧರ್ಮದ ಗುರುಗಳಾದ ಸೈಯದ್ ಮುಯೋದ್ದೀನ್ ಶಾಹ್ ಖೈಸ ಸಾಹೇಬ್ ಶಿಗ್ಗಾವಿ ,ಪೀರ್ ಜಾದ ಜಲಾಲ್ ಮೆಹಮೂದಿ ಸಾಹಬ್ ಮತ್ತು ಸೈಯದ್ ಸಾಧಿಕ್ ಸಾಹೇಬ್ ಅನವರಿ ಅಶ್ರಫಿ ಸಾಹೇಬ್ ಬಿಜಾಪುರ್ ಸೇರಿದಂತೆ ಇಸ್ಲಾಂ ಧರ್ಮದ ಅನೇಕ ಗುರುಗಳು ಪಾಲ್ಗೊಳ್ಳಲಿದ್ದಾರೆ ,ಅಲ್ಲದೆ ಧಾರ್ಮಿಕ ಕವಿಗಳು ಸಹ ಪಾಲ್ಗೊಂಡು ತಮ್ಮ ಧಾರ್ಮಿಕ ಕವನ ವಾಚನ ಮಾಡಲಿದ್ದಾರೆ ಮತ್ತು ಧರ್ಮ ಗುರುಗಳು ಪ್ರವಚನ ನೀಡಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಹೊಸಪೇಟೆ ನಗರದ ಸಮಾಜದ ಹಿರಿಯ ಮುಖಂಡ ಸಮಾಜ ಸೇವಕರಾದ ಆಸಿಫ ಅಲಿ ನಿಯಾಜಿ ಹಾಗೂ ಗಂಗಾವತಿಯ ಧರ್ಮಗುರು ಮೌಲಾನಾ ಮೊಹಮ್ಮದ್ ಮುಸ್ತಫಾ ಕಮಾಲ್ ಪಾಷಾ ಖಾದ್ರಿ ತಸ್ಕೀನಿ ಸಾಹೇಬ್ ರವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಸಮಾಜ ಬಾಂಧವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.
ಕಾರ್ಯಕ್ರಮ ವೀಕ್ಷಿಸಲು ಸಮಾಜದ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಪ್ರತಿಯೊಬ್ಬರು ಆಗಮಿಸಿ ಯಶಸ್ವಿಗೊಳಿಸಲು ಮನವಿ ಮಾಡಿಕೊಂಡಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 