ಪೋಷಣ ಅಭಿಯಾನ: ಚೊಚ್ಚಿಲು ಗರ್ಭಿಣಿಯರಿಗೆ ಸೀಮಂತ
Nutrition campaign: Babyshower for pregnant women
ಇಂಡಿ 08: ಬಾಲ್ಯ ವಿವಾಹ ಮದುವೆ ಅಲ್ಲ. ಗಂಡನ ಮನೆ ಆಸ್ತಿ ಅಂತಸ್ತಿಗೆ ಹಕ್ಕುದಾರಳಲ್ಲ ಎಂದು ಇಂಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಿಗಿಮಠ ಅವರು ಹೇಳಿದರು.
ಇಂಡಿ ತಾಲೂಕಿನ ಗೋರಿಮಟ್ಟಿ ತಾಂಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ ಅಭಿಯಾನ ಚೊಚ್ಚಿಲು ಗರ್ಭಿಣಿಯರ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗರ್ಭಿಣಿಯರು ಪುಷ್ಟಿ ಜಿಲೆಟ್ ಪೌಷ್ಟಿಕ ಆಹಾರ ಸೇವನೆ ಮೊಳಕೆ ಕಾಳುಗಳು ಸೇವನೆ ಮಾಡಬೇಕು ಎಂದು ಹೇಳಿದರು.ವೈದ್ಯಾಧಿಕಾರಿ ಡಾ. ಪ್ರಶಾಂತ ಮಾತನಾಡಿ ಗರ್ಭಿಣಿ ತಾಯಂದಿರು ಕನಿಷ್ಠ ಐದು ಬಾರಿ ತಪಾಸಣೆ ಮಾಡಿಸಿಕೊಳ್ಳಬೇಕು. ಹಸಿರು ತರಕಾರಿ ಸೊಪ್ಪು ಆಯಾ ಋತುಮಾನಕ್ಕನುಗುಣವಾಗಿ ಹಣ್ಣುಗಳು ಸೇವನೆ ಮಾಡುವುದು ಉತ್ತಮ ಎಂದು ಹೇಳಿದರು.
ವೈ ಎಂ ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣ ಶಿಕ್ಷಣಾಧಿಕಾರಿಗಳು ಮಾತನಾಡಿ ಗಂಡಿಗೆ 21 ವರ್ಷ ಹೆಣ್ಣಿಗೆ 18 ವರ್ಷ ವಯಸ್ಸಿನೊಳಗೆ ಬಾಲ್ಯ ವಿವಾಹ ಕಂಡುಬಂದಲ್ಲಿ ಕಾನೂನಿನ ಪ್ರಕಾರ 2 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ ಇದನ್ನು ಪ್ರಸ್ತುತ ನೆಂಟಸ್ತನಿಕೆ, ಬಿಗಸ್ತನ. ವಿವಾಹ ನಿಶ್ಚಯ ಅಪ್ರಾಪ್ತ ವಯಸ್ಸಿನಲ್ಲಿ ಕಂಡು ಬಂದಲ್ಲಿ ಈ ಕಾನೂನು ಅನ್ವಯವಾಗುವದು ಎಂದು ಅರಿವು ಮೂಡಿಸಿದರು.
ಮೇಲ್ವಿಚಾರಕಕಿ ಎಸ್ ಭಜಂತ್ರಿ ಮಾತನಾಡಿ ಬಾಲ ಗರ್ಭಿಣಿಯರು 80,000 ವಿಜಯಪುರ ಜಿಲ್ಲೆಯಲ್ಲಿ 6,000. ತಾಯಿ ಮರಣ ಶಿಶು ಮರಣ ಹೆಚ್ಚಳವಾಗುತ್ತಿದ್ದು ಬೆಳೆಯಬೇಕಾದ ಮಗಳು ಮಾನಸಿಕವಾಗಿ ದೈಹಿಕವಾಗಿ ಬೆಳವಣಿಗೆ ಹಂತದಲ್ಲಿ ಮಗಳ ಕೊರಳಿಗೆ ಕರಿಮಣಿ ಹಸಿ ಮಣಿ ತವಕ ಬೇಡ ಅನಾಹುತಗಳು ತಪ್ಪಿಸಿ ಎಂದು ಹೇಳಿದರು.ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್ ಹೆಚ್ ಅತನೂರ. ಶಾಲಾ ಮುಖ್ಯ ಗುರುಗಳು ಎಸ್ಡಿಎಮ್ಸಿ ಅಧ್ಯಕ್ಷ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು ತಾಯಂದಿರು ಉಪಸ್ಥಿತರಿದ್ದರು. ಎಸ್ ಕೆ ಭಜಂತ್ರಿ ಸ್ವಾಗತಿಸಿ, ನಿರೂಪಿಸಿದರು. ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 