ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ
ಲೋಕದರ್ಶನ ವರದಿ
ಮೋಳೆ 05: ಹಿಂದಿನ ಕಾಲದಲ್ಲಿ ಆಸ್ತಿಯ ವ್ಯಾಮೋಹ, ಹಣಗಳಿಕೆ ವ್ಯಾಮೋಹ ಹೆಚ್ಚಾಗಿತ್ತು. ಆದರೆ ಪ್ರಚಲಿತ ದಿನಮಾನಗಳಲ್ಲಿ ವಿದ್ಯೆಯೇ ಸರ್ವ ಸಾಧನ ಎಂದು ಅರಿತಿರುವ ಪೋಷಕರು ಮಕ್ಕಳಿಗೆ ವಿದ್ಯೆಯನ್ನು ಕಲಿಸಲು ಪ್ರೇರೆಪಿಸುತ್ತಿದ್ದಾರೆ ಎಂದು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಗಾಣಿಗೇರ ಹೇಳಿದರು.
ಅವರು ಮಂಗಳವಾರ ದಿ.5 ರಂದು ಐನಾಪುರ ಸರಕಾರಿ ಉದರ್ು ಹಿರಿಯ ಪ್ರಾಥಮಿಕ ಶಾಲಾ ಕಟ್ಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಆಸ್ತಿಯನ್ನು, ಹಣವನ್ನು ಯಾರು ಬೇಕಾದರೂ ದೋಚಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ದೇಶದಲ್ಲಿ ಅತೀ ಬಡತನದಲ್ಲಿ ಹುಟ್ಟಿ ಸಾಧನೆಗೈದು ದೇಶದ ಮಹಾನ್ ನಾಯಕರಾಗಿ ಮೆರೆದಂತಹ ಶಾಸ್ತ್ರಿಜಿ, ರಾಧಾಕೃಷ್ಣನ್,ಕಲಾಂರವರ ಕಥೆಗಳನ್ನು ಮಾದರಿಯಾಗಿ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ಉದರ್ು ಶಾಲೆಗೆ ಕಟ್ಟಡದ ಅಭಾವತೆ ಇತ್ತು ಈ ಕುರಿತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡಾಗ ಎರಡು ಶಾಲಾ ಕೊಠಡಿಗಳನ್ನು ಮಂಜೂರುಗೊಳಿಸಿದ್ದು, ಉತ್ತಮವಾಗಿ ಶಾಲಾ ಕಟ್ಟಡಗಳು ನಿರ್ಮಾಣಗೊಂಡಿವೆ, ಅದರ ಅಂದ ಕೆಡದ ಹಾಗೆ ನೋಡಿಕೊಳ್ಳಬೇಕೆಂದು ರವೀಂದ್ರ ಗಾಣಿಗೇರ ಹೇಳಿದರು. ಈ ವೇಳೆ ಶಾಲಾ ಸುಧಾರಣಾ ಸಮೀತಿಯ ಅಧ್ಯಕ್ಷ ಜಾವೇದ ಡಾಂಗೆ, ಉಪಾಧ್ಯಕ್ಷ ಸೈಫಾನ ಶೇಖ, ಮುಖ್ಯೋಪಾದ್ಯಾಯ ವೈ.ಬಿ. ಮುಲ್ಲಾ. ಮುಖಂಡರಾದ ಬಾದಷಹಾ ಡಾಂಗೆ, ಬಂದೇನವಾಜ ಸೈಯ್ಯದ, ಮೌಲಾ ನದಾಫ, ಮುಸಾ ಸೈಯ್ಯದ, ರಿಜ್ವಾನ ಮುಜಾವರ, ಇಲಾಹಿ ಸೈಯ್ಯದ, ಮೆಹಬೂಬ್ ಮುಲ್ಲಾ, ರಾಜು ಸೈಯ್ಯದ, ರಫೀಕಸೈಯ್ಯದ, ಬಾಳು ನದಾಫ,ಇಸ್ಮಾಯಿಲ್ ರಾವತ್, ಸೇರಿದಂತೆ ಅನೇಕ ಅಲ್ಪಸಂಖ್ಯಾತ ಮುಖಂಡರು ಪಾಲ್ಗೊಂಡಿದ್ದರು.
ಮುಖ್ಯೋಪಾದ್ಯಾಯ ವೈ.ಬಿ. ಮುಲ್ಲಾ ಸ್ವಾಗತಿಸಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 