ಸಿರಿಗೆರೆ, ಮೇ 26; ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಕುರಿತಂತೆ ಪ್ರತಿಕ್ರಿಯಿಸಿ - ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಒಂದೆಡೆ ಪರೀಕ್ಷಾ ದಿನಾಂಕ ಹತ್ತಿರ ಬರುತ್ತಿದ್ದರೆ ಇನ್ನೊಂದೆಡೆ ದಿನದಿಂದ ದಿನಕ್ಕೆ ಕೊರೊನಾ ಹಾವಳಿಯೂ ಹೆಚ್ಚುತ್ತಲೇ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಕೊರೊನಾ ಕಾಲಿಟ್ಟಿರುವಂಥದ್ದು ಅತ್ಯಂತ ಅತಂಕದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಸಕರ್ಾರ ಮತ್ತು ಶಿಕ್ಷಣ ಇಲಾಖೆ ಮರುಪರಿಶೀಲನೆ ಮಾಡಬೇಕು.
ವಿದ್ಯಾಥರ್ಿಗಳು ಒಂದು ಊರಿನವರು, ಒಂದು ತಾಲ್ಲೂಕಿನವರು, ಒಂದು ಜಿಲ್ಲೆಯವರಲ್ಲ. ಒಂದೇ ಶಾಲೆಯಲ್ಲಿ ಹಲವಾರು ಜಿಲ್ಲೆಯ ವಿದ್ಯಾಥರ್ಿಗಳು ಅಧ್ಯಯನ ಮಾಡುತ್ತಿರುತ್ತಾರೆ. ಅವರೆಲ್ಲರ ಪೂವರ್ಾಪರ (ಟ್ರಾವೆಲಿಂಗ್ ಹಿಸ್ಟರಿ) ತಿಳಿಯುವುದು ಕಷ್ಟಸಾಧ್ಯ. ಅವರು ಅಲ್ಲಿಂದ ಪರೀಕ್ಷಾ ಕೇಂದ್ರಕ್ಕೆ ಬರುವಾಗ ಕೊರೊನಾ ಜೊತೆಯಲ್ಲೇ ಬಂದರೆ ಗತಿ ಏನು? ಸ್ಥಳೀಯ ನಾಗರಿಕರು ಸಹ ವಿರೋಧಿಸಬಹುದು. ಇನ್ನು ವಿದ್ಯಾಥರ್ಿಗಳ ವಾಸಸ್ಥಳದ ಸಮೀಪವಿರುವ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವುದಾಗಿ ಶಿಕ್ಷಣ ಮಂತ್ರಿಗಳು ತಿಳಿಸಿದ್ದಾರೆ. ಆದರೂ ಒಂದು ಕೇಂದ್ರದಲ್ಲಿ ಏನಿಲ್ಲವೆಂದರೂ 150-200 ವಿದ್ಯಾಥರ್ಿಗಳು ಒಂದೆಡೆ ಸೇರುವುದು ಆತಂಕದ ವಿಷಯ. ಏನೇ ಅಂತರ ಕಾಪಾಡಬೇಕೆಂದರೂ ಮಕ್ಕಳಿಗದು ಕೆಲವೊಮ್ಮೆ ಕಷ್ಟಸಾಧ್ಯ. ಇಷ್ಟು ದಿವಸ ಮಾಡಿದ ಪ್ರಯತ್ನಗಳೆಲ್ಲವೂ ಮಣ್ಣುಪಾಲಾಗುವ ಸಂಭವವೇ ಹೆಚ್ಚು. ಅಷ್ಟಕ್ಕೂ ಪಡೆದ ಶಿಕ್ಷಣವನ್ನು ಮೌಲ್ಯಮಾಪನ ಮಾಡಲು ಇರುವ ಸಾಧನ ಪರೀಕ್ಷೆ. ಪರೀಕ್ಷೆಯೇ ಶಿಕ್ಷಣವಲ್ಲ. ಈಗಾಗಲೇ ಅವರು ವರ್ಷಪೂತರ್ಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.
ಪರೀಕ್ಷೆಯಿಂದ ವಿದ್ಯಾಥರ್ಿಯ, ಶಾಲಾ-ಕಾಲೇಜುಗಳ ಸ್ಥಾನಮಾನದ ಮಾಪನವಾಗಬಹುದೇ ಹೊರತು ಕಲಿತ/ನೀಡಿದ ಶಿಕ್ಷಣದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಅಷ್ಟಕ್ಕೂ ಜೀವಕ್ಕಿಂತ ಯಾವ ಪರೀಕ್ಷೆಯೂ ದೊಡ್ಡದಲ್ಲ.
ಈ ನಿಟ್ಟಿನಲ್ಲಿ ಈ ಬಾರಿ ಪರೀಕ್ಷೆಯನ್ನು ರದ್ದುಪಡಿಸುವುದು ವಿದ್ಯಾಥರ್ಿಗಳ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸೂಕ್ತ, ಯೋಗ್ಯ ನಿರ್ಣಯವಾಗಬಹುದು. ಆಯಾ ಶಾಲೆಯಲ್ಲಿ ವರ್ಷಪೂತರ್ಿ ನಡೆಸಿದ ನಿರಂತರ ಮೌಲ್ಯಮಾಪನದ ವಹಿ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ವಹಿ ಇದ್ದೇ ಇದೆ. ಇವುಗಳ ಆಧಾರದ ಮೇಲೆ ಆಯಾ ಶಾಲೆಯ ಅಧ್ಯಾಪಕರು ಮತ್ತು ಮುಖಸ್ಥರು ಅಂಕಗಳ ಬದಲಿಗೆ `ಎ, ಬಿ, ಸಿ, ಡಿ' ಎಂದು ಗ್ರೇಡ್ ಕೊಡಬಹುದು. ಸಮಾಜದ ಹಿತದೃಷ್ಟಿಯಿಂದ ಈ ಬಗ್ಗೆ ಶಿಕ್ಷಣ ಸಚಿವರು ತಜ್ಞರ ಜೊತೆ ಚಚರ್ಿಸಿ ಯೋಗ್ಯ ತೀಮರ್ಾನ ತೆಗೆದುಕೊಳ್ಳಬೇಕೆಂದು ಆಶಿಸುತ್ತೇವೆ.