ಪೆಂಡಾರ ಗಲ್ಲಿ ನೂತನ ನಾಮಫಲಕ ಅನಾವರಣ

ಪೆಂಡಾರ ಗಲ್ಲಿ ನೂತನ ನಾಮಫಲಕ ಅನಾವರಣ  New nameplate unveiled at Pendara Galli

ಜಮಖಂಡಿ 31: ನಗರ ಸೌಂದರ್ಯೀಕರಣಕ್ಕೆ ಸರಕಾರವನ್ನೇ ಅವಲಂಬಿತರಾಗದೆ ಇಂದಿನ ಯುವಜನತೆ ನಗರ ಸ್ವಚ್ಛತೆಗಾಗಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದ ವಿಜಯಪುರ ರಸ್ತೆಯ ಪಕ್ಕದಲ್ಲಿ ಪೆಂಡಾರ ಗಲ್ಲಿ ನೂತನ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಯುವಕರ ಶಕ್ತಿ ನಗರ ಸ್ವಚ್ಛತೆಕಡೆ ಇರಬೇಕು. ಪ್ರತಿವಾರಕ್ಕೊಮ್ಮೆ ತಮ್ಮ ಗಲ್ಲಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವದರ ಮೂಲಕ ಸ್ವಚ್ಛ ಮಾದರಿ ನಗರ ನಿರ್ಮಿಸಬೇಕು ಎಂದರು. 

ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಹಾಜಿ ಇನ್ನಾ ಪೆಂಡಾರಿ, ಬಿ.ಎಸ್‌.ಸಿಂಧೂರ,  ಬದ್ರೋದ್ದೀನ್ ಪೆಂಡಾರಿ, ತೌಫೀಕ್ ಪಾರ್ಥನಳ್ಳಿ, ನಗರಸಭೆ ಸದಸ್ಯೆ ಫಾತೀಮಾ ಜಮಾದಾರ, ಪರಮಾನಂದ ಗವರೋಜಿ, ಕಿರಣ ಪಿಸಾಳ, ಜಾಕೀರಹುಸೇನ್ ನದಾಫ, ಸಾಧೀಕ ಪಠಾಣ, ಯಾಸೀನ ಯಾದವಾಡ, ಖಿಜರ ಪೆಂಡಾರಿ, ಫಾರೂಕ ಪೆಂಡಾರಿ, ಅಮೀರಸೋಹೆಲ ಮೀರ್, ಜುಬೇರ್ ಪೆಂಡಾರಿ, ಆಫ್ರೀಧಿ ಪೆಂಡಾರಿ,  ಅಜರ ಪೆಂಡಾರಿ, ಇಲಿಯಾಸ್ ಪೆಂಡಾರಿ, ಇಸ್ಮಾಯಿಲ್ ಪೆಂಡಾರಿ, ಬಂದೇನವಾಜ ಬೇಪಾರಿ, ಫಯಾಜ್ ಬುದಿಹಾಳ, ಸಾಧೀಕ್ ಪೆಂಡಾರಿ, ಗುಲಾಬ ಪೆಂಡಾರಿ, ಶಾಹೀದ ಪೆಂಡಾರಿ ಸೇರಿದಂತೆ ಅನೇಕರು ಇದ್ದರು.