ಇಂದು ನೂತನ ಸಮುದಾಯ ಭವನಕ್ಕೆ ಚಾಲನೆ
New community hall inaugurated today
ಬೆಳಗಾವಿ 3:- ಗೋಕಾಕ ತಾಲೂಕಿನ ಶಿಂದೀಕರಬೆಟ್ ಗ್ರಾಮದ ಶ್ರೀ ಯಮನೂರಪ್ಪ ದೇವಸ್ಥಾನ ಪಕ್ಕ, ಸಂಸದ ಈರಣ್ಣಾ ಕಡಾಡಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಮುದಾಯ ಭವನದ ಉದ್ಘಾಟನೆ ದಿ.4 ರಂದು ಮಧ್ಯಾಹ್ನ 11.30 ಕ್ಕೆ ನಡೆಯಲಿದೆ. ಸಂಸದ ಈರಣ್ಣಾ ಕಡಾಡಿ ಅವರು ನೂತನ ಸಮುದಾಯ ಭವನಕ್ಕೆ ಚಾಲನೆ ನೀಡುವರು. ಅ.ಕ. ಜನ ಜಾಗೃತಿ ಬೆಳಗಾವಿ-2 ಅಧ್ಯಕ್ಷ ನಾಗಲಿಂಗ ಪೋತದಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಘಟಪ್ರಭಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಚ್.ಡಿ. ಮುಲ್ಲಾ, ಗ್ರಾ.ಪಂ. ಅಧ್ಯಕ್ಷೆ ರೂಪಾ ಸಿದ್ಧಾರೂಢ ಕಂಬಾರ, ಪ್ರಗತಿಪರ ರೈತ ಮಹಾಂತೇಶ ಹಳ್ಳಿ, ಯೋಗ ಶಿಕ್ಷಕ ಯಮನಪ್ಪ ಹೊನಕುಪ್ಪಿ, ಆಧ್ಯಾತ್ಮಿಕ ಚಿಂತಕ ಹಣಮಂತ ಮಾನೆ, ಸಂಗೀತ ಕಲಾವಿದ ಮುತ್ತು ಭೋವಿ, ಎಸ್.ಕೆ.ಡಿ.ಆರ್.ಪಿ. ಮೇಲ್ವಿಚಾರಕಿ ಕವಿತಾ ಎಸ್.ಟಿ. ಇವರು ಆಗಮಿಸುವರು. ಈ ರೀತಿ ಜರಗುವ ಕಾರ್ಯಕ್ರಮಕ್ಕೆ ಸರ್ವರೂ ಸಹಕರಿಸಬೇಕೆಂದು ಅರ್ಚಕರಾದ ಖಟಾವಕರ ಸಹೋದರರು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 