ಇಂದು ನೂತನ ಸಮುದಾಯ ಭವನಕ್ಕೆ ಚಾಲನೆ
New community hall inaugurated today
ಬೆಳಗಾವಿ 3:- ಗೋಕಾಕ ತಾಲೂಕಿನ ಶಿಂದೀಕರಬೆಟ್ ಗ್ರಾಮದ ಶ್ರೀ ಯಮನೂರಪ್ಪ ದೇವಸ್ಥಾನ ಪಕ್ಕ, ಸಂಸದ ಈರಣ್ಣಾ ಕಡಾಡಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಮುದಾಯ ಭವನದ ಉದ್ಘಾಟನೆ ದಿ.4 ರಂದು ಮಧ್ಯಾಹ್ನ 11.30 ಕ್ಕೆ ನಡೆಯಲಿದೆ. ಸಂಸದ ಈರಣ್ಣಾ ಕಡಾಡಿ ಅವರು ನೂತನ ಸಮುದಾಯ ಭವನಕ್ಕೆ ಚಾಲನೆ ನೀಡುವರು. ಅ.ಕ. ಜನ ಜಾಗೃತಿ ಬೆಳಗಾವಿ-2 ಅಧ್ಯಕ್ಷ ನಾಗಲಿಂಗ ಪೋತದಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಘಟಪ್ರಭಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಚ್.ಡಿ. ಮುಲ್ಲಾ, ಗ್ರಾ.ಪಂ. ಅಧ್ಯಕ್ಷೆ ರೂಪಾ ಸಿದ್ಧಾರೂಢ ಕಂಬಾರ, ಪ್ರಗತಿಪರ ರೈತ ಮಹಾಂತೇಶ ಹಳ್ಳಿ, ಯೋಗ ಶಿಕ್ಷಕ ಯಮನಪ್ಪ ಹೊನಕುಪ್ಪಿ, ಆಧ್ಯಾತ್ಮಿಕ ಚಿಂತಕ ಹಣಮಂತ ಮಾನೆ, ಸಂಗೀತ ಕಲಾವಿದ ಮುತ್ತು ಭೋವಿ, ಎಸ್.ಕೆ.ಡಿ.ಆರ್.ಪಿ. ಮೇಲ್ವಿಚಾರಕಿ ಕವಿತಾ ಎಸ್.ಟಿ. ಇವರು ಆಗಮಿಸುವರು. ಈ ರೀತಿ ಜರಗುವ ಕಾರ್ಯಕ್ರಮಕ್ಕೆ ಸರ್ವರೂ ಸಹಕರಿಸಬೇಕೆಂದು ಅರ್ಚಕರಾದ ಖಟಾವಕರ ಸಹೋದರರು ತಿಳಿಸಿದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 