28ರಂದು ನೂತನ ರಥೋತ್ಸವದ ಉದ್ಘಾಟನೆ

28ರಂದು ನೂತನ ರಥೋತ್ಸವದ ಉದ್ಘಾಟನೆ  New chariot festival to be inaugurated on 28th

ತಾಳಿಕೋಟಿ 24: ಪಟ್ಟಣದ ಆರಾಧ್ಯ ದೈವ ಬಂಡಿ ಬಸವೇಶ್ವರ ದೇವಸ್ಥಾನದ 216ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ನೂತನವಾಗಿ ನಿರ್ಮಿಸಿದ ರಥೋತ್ಸವದ ಉದ್ಘಾಟನಾ ಸಮಾರಂಭ ಮಾರ್ಚ್‌ 28 ಶನಿವಾರದಂದು ನಡೆಯಲಿದೆ. ಅಂದು ಸಂಜೆ 4.30 ಘಂಟೆಗೆ ಪಟ್ಟಣದ ಬಂಡಿ ಬಸವೇಶ್ವರ ದೇವಸ್ಥಾನ( ಕನ್ನಡ ಶಾಲೆ ಆವರಣ) ದಲ್ಲಿ ಜರುಗಲಿರುವ ಈ ಸಮಾರಂಭದ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ವಹಿಸಲಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್‌.ನಾಡಗೌಡ ಅಪ್ಪಾಜಿ ಅವರು ಉದ್ಘಾಟಿಸುವರು.

ಕಲಬುರ್ಗಿ ದಕ್ಷಿಣ ಭಾಗದ ಶಾಸಕ ಅಲ್ಲಮಪ್ರಭು ಪಾಟೀಲರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ರಥೋತ್ಸವಕ್ಕೆ ಪುಷ್ಪಾರ್ಚನೆ ಅರ​‍್ಿಸುವರು. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ, ದೇವಸ್ಥಾನ ಮುಖ್ಯಸ್ಥ ಡಾ.ಬಾಪುಗೌಡ ಸಂ.ಪಾಟೀಲ, ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಹಾಗೂ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ (ಕೂಚಬಾಳ) ಅತಿಥಿಗಳಾಗಿ ಆಗಮಿಸಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶರಣಗೌಡ ಸಂ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.