ನವರಾತ್ರಿ ಉತ್ಸವ ನಿಮಿತ್ಯ ಘಟಸ್ಥಾಪನೆ ಕಾರ್ಯಕ್ರಮ

ನವರಾತ್ರಿ ಉತ್ಸವ ನಿಮಿತ್ಯ ಘಟಸ್ಥಾಪನೆ ಕಾರ್ಯಕ್ರಮ Navaratri festival inauguration program

ಯರಗಟ್ಟಿ, 23 : ನಾಡ ಹಬ್ಬ ದಸರಾ, ನವರಾತ್ರಿ ಉತ್ಸವ ನಿಮಿತ್ಯ ಪಟ್ಟಣದ ಗ್ರಾಮದೇವಿಯರ, ಕಾಳಿಕಾದೇವಿ, ವೀರಭದ್ರೇಶ್ವರ, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ರಾಜರಾಜೇಶ್ವರಿ ಆಶ್ರಮದಲ್ಲಿ ಭಾನುವಾರ ಧಾರ್ಮಿಕ ಪರಂಪರೆಯಂತೆ ಘಟಸ್ಥಾಪನೆ ಕಾರ್ಯಕ್ರಮ ನಡೆಯಿತು. 

ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೂ ದೇವಿಗೆ ಕಾಕಡಾರತಿ, ಕ್ಷೀರಾಭಿಷೇಕ, ಜಲಾಭಿಷೇಕ, ಕುಂಕುಮಾರ್ಚನೆ ಅನೇಕ ಬಗೆಯ ಪೂಜಾ ಕಾರ್ಯಕ್ರಮಗಳು ನೆರವೇರಿಸಿದ ಬಳಿಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರವಚನಕಾರ ಮಡಿವಾಳಪ್ಪ ವನ್ನೂರ ಹಾಗೂ ತುರುಮರಿಯ ಪೂಜ್ಯ ಶಾಂತಯ್ಯ ಮಹಸ್ವಾಮಿಗಳು ಇವರಿಂದ ದೇವಿ ಪಾರಾಯಣ ಜರುಗಿತು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ನೈವೇದ್ಯ ಅರ​‍್ಿಸಿ ದರ್ಶನ ಪಡೆದರು. 

ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಮುತ್ತೈದೆಯರಿಗೆ ಪೂಜೆ ಸಲ್ಲಿಸಲಾಯಿತು. ಪೂಜ್ಯ ಗಣಪತಿ ಮಹಾರಾಜರು, ಎ. ಜಿ. ಪತ್ತಾರ, ಡಾ. ಕಾಶೀನಾತ ಅಂಗಡಿ, ವಿ. ಎಮ್‌. ಮರಡಿ, ಶಿವಾನಂದ ಹಂಜಿ, ಸುಭಾಸ ರೊಗೆ, ಡಾ. ವಿಶ್ವಾನಾಥ ತಾಂವಶಿ, ಮಹಾದೇವ ದಂಡಿನದುರ್ಗಿ, ಬಿ. ಕೆ. ರಂಗಣ್ಣವರ, ವಾಯ್‌. ಎಮ್‌. ಕಡಕೋಳ, ರಾಜೇಂದ್ರ ಶೆಟ್ಟಿ, ವಿಶ್ವಾನಾಥ ಹೊಳಿಮಠ, ಆಶಾ ಪರೀಟ, ಶೋಭಾ ದಂಡಿನದುರ್ಗಿ, ಮೈತ್ರಾ ಹೊಂಗಲ, ಮುಖಂಡರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.