ರಾಷ್ಟ್ರೀಯ ಗಣತಿ ಕಾರ್ಯಕ್ಕೆ ಚಾಲನೆ ಗಣತಿದಾರರು ಮೊದಲು ಆಯಾ ಭಾಗದ ಚೆಕ್ಬಂದಿ ಸರಿಯಾಗಿ ಅರ್ಥೈಸಿಕೊಳ್ಳಿ: ರಾಯನಗೌಡಪಟ್ಟಣ

ರಾಷ್ಟ್ರೀಯ ಗಣತಿ ಕಾರ್ಯಕ್ಕೆ ಚಾಲನೆ ಗಣತಿದಾರರು ಮೊದಲು ಆಯಾ ಭಾಗದ ಚೆಕ್ಬಂದಿ ಸರಿಯಾಗಿ ಅರ್ಥೈಸಿಕೊಳ್ಳಿ: ರಾಯನಗೌಡಪಟ್ಟಣ    National Census work underway, enumerators should first understand the checkpoints of their respecti

ಹನುಮಸಾಗರದ 17:  ಪಪಂ ಕಾರ್ಯಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಜನಗಣತಿಗೆ ಚಾಲನೆ ನೀಡಲಾಯಿತು. ಹನುಮಸಾಗರ ರಾಷ್ಟ್ರೀಯ ಜನಗಣತಿ ಕಾರ್ಯ ಏ.16 ರಿಂದ ಅಧಿಕೃತವಾಗಿ ಆರಂಭವಾಗಿದ್ದು, ಸಾರ್ವಜನಿಕರು ಗಣತಿದಾರರು ಮನೆಗೆ ಬಂದಾಗ ಸಮರ​‍್ಕ ಹಾಗೂ ನಿಖರ ಮಾಹಿತಿ ನೀಡಬೇಕು ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.ಇಲ್ಲಿನ ಪಪಂ ಕಾರ್ಯಾಲಯದಲ್ಲಿ ಗುರುವಾರ ನಡೆದ ಗಣತಿದಾರರ ಮತ್ತು ಮೇಲ್ವಿಚಾರಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಗಣತಿ ಕಾರ್ಯ ಅತ್ಯಂತ ವ್ಯವಸ್ಥಿತ ಹಾಗೂ ನಿಖರವಾಗಿ ಕೈಗೊಳ್ಳಬೇಕು.

ಗಣತಿದಾರರು ಮೊದಲು ಆಯಾ ಭಾಗದ ಚಕ್ಕು ಬಂದಿಯನ್ನು ಸರಿಯಾಗಿಅರ್ಥೈಸಿಕೊಳ್ಳಬೇಕು. ಗಣತಿ ಆರಂಭಿಸುವಾಗ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಮೂಲ ರಸ್ತೆಯಿಂದಲೇ ಕಾರ್ಯ ಪ್ರಾರಂಭಿಸಬೇಕು. ಪ್ರತಿ ಮನೆ ಹಾಗೂ ಲ್ಯಾಂಡ್ಮಾರ್ಕ್‌ ಸ್ಪಷ್ಟವಾಗಿ ದಾಖಲಿಸಬೇಕು. ತಾಂತ್ರಿಕ ಸವಾಲುಗಳ ಕುರಿತು ಪ್ರಸ್ತಾಪಿಸಿದ ಅವರು, ಗಣತಿ ವೇಳೆ ಬಳಸುವ ಮೊಬೈಲ್ ಆಪ್ಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಯಾವುದೇ ಅಡಚಣೆ ಉಂಟಾದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಗಣತಿ ಕಾರ್ಯಕ್ಕಾಗಿ ಒಟ್ಟು 20 ಬ್ಲಾಕ್ಗಳನ್ನು ಗುರುತಿಸಲಾಗಿದೆ.

ಈ ಕಾರ್ಯಕ್ಕಾಗಿ 26 ಗಣತಿದಾರರನ್ನು ಹಾಗೂ ಅವರಿಗೆ ಮಾರ್ಗದರ್ಶನ ನೀಡಲು 6 ಜನ ಮೇಲ್ವಿಚಾರಕರನ್ನುಗಣತಿ ಆರಂಭಿಸುವಾಗ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಮೂಲ ರಸ್ತೆಯಿಂದಲೇ ಕಾರ್ಯ ಪ್ರಾರಂಭಿಸಬೇಕುಪ್ರತಿ ಮನೆ ಹಾಗೂ ಲ್ಯಾಂಡ್ಮಾರ್ಕ್‌ ಸ್ಪಷ್ಟವಾಗಿ ದಾಖಲಿಸಬೇಕುನೇಮಕ ಮಾಡಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಎಂದರು.ಮೇಲ್ವಿಚಾರಕ ಕಿಶನರಾವ್ ಕುಲಕರ್ಣಿ ಮಾತನಾಡಿ, ಮೊದಲ ಮೂರು ದಿನಗಳ ಕಾಲ ಮ್ಯಾಪಿಂಗ್ ಪ್ರಕ್ರಿಯೆ ನಡೆಯಲಿದ್ದು, ತದ ನಂತರ ಮನೆ-ಮನೆಗೆ ಗಣತಿ ಆರಂಭವಾಗಲಿದೆ. ಸಾರ್ವಜನಿಕರು ಈಗಾಗಲೇ ಆನ್ ಲೈನ್ ಮೂಲಕ ಸ್ವಯಂ ಗಣತಿ ಮಾಡಿಕೊಂಡಿದ್ದರೆ,

ಅದರಲ್ಲಿ ಏನಾದರೂ ತಿದ್ದುಪಡಿಗಳಿದ್ದಲ್ಲಿ ಗಣತಿದಾರರು ಮನೆಗೆ ಬಂದಾಗ ಸರಿಪಡಿಸಿಕೊಂಡು ದೃಢೀಕರಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಮೇಲ್ವಿಚಾರಕ ರಾಮಚಂದ್ರ ಬಡಿಗೇರ, ಹಬೀಬಪಾಶಾ ಮಕಾಂದಾರ, ಹುಲಗಪ್ಪ ಕೊಪ್ಪಳ, ಚಂದ್ರಶೇಖರ ಗುಳೆದ ಸೇರಿದಂತೆ ಪಪಂ ಸಿಬ್ಬಂದಿ ಮಹಾಂತಯ್ಯ ಕೊಮಾರಿ, ವೀರೇಶ ಕುರನಾಳ, ಹನುಮೇಶ ಪತ್ತಾರ, ಬಸವರಾಜ ಶಿವಸಿಂಪಿ, ಚಂದಯ್ಯ ಹಿರೇಮಠ, ಮಹಿಬೂಬ್ ಹಾಗೂ ಇತರರು ಇದ್ದರು.