ದಿವಂಗತ ಶ್ರೀ ಬಾಪು ಶ್ರೀಶೈಲ್ ಕೋಷ್ಠಿ ಸಭಾ ಮಂಟಪವನ್ನು ನಾಮಕರಣ
Naming of the late Shri Bapu Shrishail Koshti Sabha Mantapa
ಸಂಬರಗಿ28 : ಅತ್ಯಂತ ಪ್ರಾಚೀನ ದೇವಾಲಯದ ನವೀಕರಿಸಿದ ಪ್ರವೇಶದ್ವಾರದ ಪಕ್ಕದಲ್ಲಿರುವ ಸ್ಥಳದಲ್ಲಿ ಒಂದು ಭವ್ಯವಾದ ಸಭಾ ಭವನವನ್ನು ನಿರ್ಮಿಸಲಾಗಿದೆ ಮತ್ತು ಮಂಗಸೂಳಿಯ ಬಡ ರೈತರು, ಕಾರ್ಮಿಕರು ಮತ್ತು ಸಾಮಾನ್ಯ ನಾಗರಿಕರಿಗೆ ಶುಭ ಕಾರ್ಯಗಳನ್ನು ಸುಗಮಗೊಳಿಸಲು ಮತ್ತು ವಿವಿಧ ಬಹುಪಯೋಗಿ ಕಾರ್ಯಕ್ರಮಗಳನ್ನು ನಡೆಸಲು ಎಲ್ಲಾ ಸೌಲಭ್ಯಗಳೊಂದಿಗೆ ಸಭೆ ಸಭಾಂಗಣವನ್ನು ನಿರ್ಮಿಸಲಾಗಿದೆ, ಇದು ಮಂಗಸುಳಿ ಗ್ರಾಮದ ಗತವೈಭವವನ್ನು ಹೆಚ್ಚಿಸುತ್ತದೆ. ಎಂದು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವಾದ ಭಾಷಣದಲ್ಲಿ ಹೇಳಿದರು.ಮಂಗಸೂಳಿ ಗ್ರಾಮದಲ್ಲಿ ಸ್ವಾಮೀಜಿ ಆಶೀರ್ವಚನ ಭಾಷಣದಲ್ಲಿ ಮಾತನಾಡಿ ಅವರು ಕೇವಲ ಎರಡು ತಿಂಗಳ ದಲ್ಲಿ ಕಾಮಗಾರಿ ಪೂರ್ಣಗೊಂಡು ದಿವಂಗತ ಶ್ರೀ ಬಾಪು ಶ್ರೀಶೈಲ್ ಕೋಷ್ಠಿ ಸಭಾ ಮಂಟಪವನ್ನು ನಾಮಕರಣ ಮಾಡಿ ಉದ್ಘಾಟಿಸಲಾಯಿತು ಈ ಸಭಾಭವನ ಸುತ್ತಮುತ್ತ ಗ್ರಾಮದ ಜನರಿಗೆ ಅನುಕೂಲವಾಗಿದೆ ಜನರು ಇಲ್ಲಿ ಯಾವುದೇ ಕಾರ್ಯಕ್ರಮ ನಡೆಸಬಹುದು ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಮುಂದು ನಿಂತು ಮಂಟಪದ ಕೆಲಸವನ್ನು ಅತ್ಯುತ್ತಮವಾಗಿ ಮಾಡಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಇದರ ಶ್ರೇಯಸ್ಸು ಚಿದಾನಂದ ಮಾಳಿ ದೇವಸ್ತಾನ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಸಲ್ಲುತ್ತದೆ.
ಈ ಸಂದರ್ಭದಲ್ಲಿ, ಶ.ಬ್ರ.108 ಗುರು ಡಾ. ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ಸಂಸ್ಥಾನ ಮೈಶಾಳ, ಧಮ್ಜಿ ಮಹಾರಾಜ್ ಚಾವಲಿ ಮಠ ಲಿಂಗನೂರು, ಶ್ರೀ ವಿಷ್ಣು ಅಣ್ಣಾ ಕಾಲೆ ಅಭಯಸಿಂಹ ಪಾಟೀಲ್ ಧರ್ಮರಾಜ್ ಗಡಿಗಿ,ಮಲ್ಲಪ್ಪ ಮಗದುಮ್, ಧನಪಾಲ್ ಕೋಷ್ಠಿ,ಪ್ರಕಾಶ್ ತೇಲಿ,ಸಂಜಯ್ ತೇಲಿ, ಪರಶುರಾಮ ಮಾಲಿ, ಪ್ರಕಾಶ್ ಮಾಳಿ,ಪ್ರವೀಣ್ ಮಳಿ, ರಾಜು ಮಾಲಿ, ರಾಮ್ ಮಾಳಿ,ವಿಷ್ಣು ಮಾಳಿ, ಅನಿಲ ಜಾಧವ,ಪ್ರಶಾಂತ್ ಮಳಿ, ಪ್ರಭುಲಿಂಗ ಸ್ವಾಮಿ, ಶಿವಾನಂದ ಸ್ವಾಮಿ, ಸಂದೀಪ ಬೆಳಂಕೆ ಬಸವರಾಜ ಮಗದುಮ್, ಸೇರಿದಂತೆ ಮಂಗಸೂಳಿಯ ಅನೇಕ ಭಕ್ತರು, ಗಣ್ಯರು ಉಪಸ್ಥಿತರಿದ್ದರು .
ಕಾರ್ಯಕ್ರಮದ ನಂತರ ಎಲ್ಲರಿಗೂ ಮಹಾಪ್ರಸಾದ ವಿತರಿಸಲಾಯಿತು. ದೇವಸ್ಥಾನದ ಅಧ್ಯಕ್ಷ ಶ್ರೀ ಚಿದಾನಂದ ಮಾಳಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 