ಮೈಸೂರ್ ದಸರಾ ಮಹೋತ್ಸವ 2025 ಅದ್ಭುತ ತಬಲಾ ವಾದನ ಕಾರ್ಯಕ್ರಮ
Mysore Dasara Festival 2025 Amazing Tabla Performance
ಲೋಕದರ್ಶನ ವರದಿ
ಮೈಸೂರ್ ದಸರಾ ಮಹೋತ್ಸವ 2025 ಅದ್ಭುತ ತಬಲಾ ವಾದನ ಕಾರ್ಯಕ್ರಮ
ಹುಬ್ಬಳ್ಳಿ 05: ವಿಶ್ವ ವಿಖ್ಯಾತ ಮೈಸೂರ್ ದಸರಾ ಮಹೋತ್ಸವ 2025 ರಂದು ಜಗನ್ಮೋಹನ ಅರಮನೆ ವೇದಿಕೆಯಲ್ಲಿ ಆಯೋಜಿಸಿದ್ದ ಸಪ್ತ ತಬಲಾ ವಾದನ ಕಾರ್ಯಕ್ರಮದಲ್ಲಿ ನಿನಾದ ತಬಲಾ ವಿದ್ಯಾಲಯದ ಗುರುಗಳಾದ ವೀರೇಶ ಅಕ್ಕಿ, ಹಾಗೂ ವಿದ್ಯಾರ್ಥಿಗಳಾದ ಶರಣು ಭಜಂತ್ರಿ, ಪಾರ್ಥ ಚಟಪಲ್ಲಿ, ರಾಘವೇಂದ್ರ ಕಲಬುರ್ಗಿ, ಅದ್ವೈತ ಕುಲಕರ್ಣಿ, ಅಚ್ಯುತ್ ಕದಂ, ನರೇಶ್ ಇಲ್ಲೂರು ಅವರು ಭಾಗವಹಿಸಿ ಅದ್ಭುತ ತಬಲಾ ವಾದನ ಕಾರ್ಯಕ್ರಮ ನೀಡಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯಾದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸಂತಸ ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶುಭ ಕೋರಿದ್ದಾರೆ. ದುರ್ಗೇಶ್ ನಿಲೋಗಲ್ ವಯೋಲಿನ, ಪ್ರಮೋದ್ ಹೆಬ್ಬಳ್ಳಿ ಹಾರ್ಮೋನಿಯಂ ಸಾಥ್ ನೀಡಿದ್ದರು. ಕಲಾವಿದರಿಗೆ ಮೈಸೂರ ದಸರಾ ಮಹೋತ್ಸವದ ಮುಖ್ಯ ಕಾರ್ಯ ನಿರ್ವಹನಾಧಿಕಾರಿಗಳಾದ ಎಸ್. ಯುಕೇಶ್ ಕುಮಾರ್ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 