ಸರಕಾರಿ ಶಾಲೆಗಳ ಪ್ರಗತಿಗೆ ಶಿಕ್ಷಕರು ಮತ್ತು ಪಾಲಕರ ಪರಸ್ಪರ ಸಮಾಲೋಚನೆ ಅಗತ್ಯ
Mutual consultation between teachers and parents is necessary for the progress of government schools
ಸರಕಾರಿ ಶಾಲೆಗಳ ಪ್ರಗತಿಗೆ ಶಿಕ್ಷಕರು ಮತ್ತು ಪಾಲಕರ ಪರಸ್ಪರ ಸಮಾಲೋಚನೆ ಅಗತ್ಯ
ರಾಣೇಬೆನ್ನೂರು 10: ಇಂದಿನ ಸ್ಪರ್ಧಾತ್ಮಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು, ತಮ್ಮ ವೈಜ್ಞಾನಿಕ ಮತ್ತು ದೂರ ದೃಷ್ಟಿಯ ಶಿಕ್ಷಣ ದೊರಕಿಸುವಲ್ಲಿ ಪ್ರತಿಯೊಬ್ಬರು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಝೆಡ್.ಎಂ. ಖಾಜಿ ಕರೆ ನೀಡಿದರು. ಅವರು, ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಸರ್ವತಿ ಸಂಸ್ಥೆ ಹಾಗೂ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಆಯೋಜಿಸಿದ್ದ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಏರಿ್ಡಸಲಾಗಿದ್ದ, ಶೈಕ್ಷಣಿಕ ಪ್ರಗತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
2025 ನೇ ಸಾಲಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿದೆಯಾದರೂ, ಭವಿಷ್ಯದ 2026ನೇ ಸಾಲಿನಲ್ಲಿ ಇನ್ನಷ್ಟು ಉತ್ತಮ ಫಲಿತಾಂಶವನ್ನು ಗಳಿಸುವುದರ ಮೂಲಕ ಎಸ್ ಎಸ್ ಎಲ್ ಸಿ ಫಲಿತಾಂಶ ರಾಜ್ಯದಲ್ಲಿಯೇ ಪ್ರಥಮ ಪ್ರಗತಿ ಸಾಧಿಸುವ ಗುರಿ ಇಟ್ಟುಕೊಳ್ಳಬೇಕು ಎಂದರು. ಸರಕಾರಿ ಶಾಲೆಗಳ ಪ್ರಗತಿ ಮತ್ತು ಮಕ್ಕಳ ದಾಖಲಾತಿ ಗಣನೀಯವಾಗಿ ಬೆಳೆಯಬೇಕಾದರೆ ಮುಖ್ಯೋಪಾಧ್ಯಾಯರು, ಪ್ರತಿಭಾವಂತ ಮಕ್ಕಳ ಮತ್ತು ಸಾಮಾನ್ಯ ಮಕ್ಕಳ ಪಾಲಕರ ಜೊತೆಗೆ ಪರಸ್ಪರ ಸಮಾಲೋಚಿಸುವುದರ ಮೂಲಕ, ಅವರ ಶೈಕ್ಷಣಿಕ ಪ್ರಗತಿ ಪರಿಪೂರ್ಣತೆಗೆ ಗಮನಹರಿಸಲು ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಅವರು ನಗರವು ಸೇರಿದಂತೆ ತಾಲೂಕಿನಲ್ಲಿ ಶಿಕ್ಷಣ ಪ್ರಗತಿಗಾಗಿ, ಮೇಲಿಂದ ಮೇಲೆ ತರಬೇತಿ ಕಾರ್ಯಗಾರಗಳು ಆಯೋಜಿಸುತ್ತ ಬರಲಾಗಿದೆ. ರಜೆ ಮುಕ್ತಾಯದ ಹಂತಾ ತಲುಪಿದ್ದೇವೆ ಇಂದಿನಿಂದಲೇ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕು ಎಂದರು. ಶ್ರೀಮತಿ ಸುಜಾತಾ ಸಂಗಡಿಗರು ಪ್ರಾರ್ಥಿಸಿದರು ಸಮನ್ವಯಾಧಿಕಾರಿ ಮಂಜುನಾಯಕ, ಸ್ವಾಗತಿಸಿ, ಎಂ.ಎಂ. ಮಾಗನೂರು ನಿರೂಪಿಸಿ ಡಯಟ್ ಉಪನ್ಯಾಸಕ ಮಹಾಂತೇಶ್ ಡಿ. ಎನ್, ವಂದಿಸಿದರು. ವೇದಿಕೆಯಲ್ಲಿ ಇಲಾಖೆ ಸಿಬ್ಬಂದಿ, ಶಿಕ್ಷಕ ಸಮುದಾಯಗಳ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 